Select Your Language

Notifications

webdunia
webdunia
webdunia
webdunia

ನಟ ಚೇತನ್ ವಿರುದ್ಧ ಫಿಲಂ ಚೇಂಬರ್ ಗೆ ದೂರು ನೀಡಿದ ಸರ್ಜಾ ಮ್ಯಾನೇಜರ್ ಶಿವಾರ್ಜುನ್

ನಟ ಚೇತನ್ ವಿರುದ್ಧ ಫಿಲಂ ಚೇಂಬರ್ ಗೆ ದೂರು ನೀಡಿದ ಸರ್ಜಾ ಮ್ಯಾನೇಜರ್ ಶಿವಾರ್ಜುನ್
ಬೆಂಗಳೂರು , ಮಂಗಳವಾರ, 30 ಅಕ್ಟೋಬರ್ 2018 (07:14 IST)
ಬೆಂಗಳೂರು : ನಟ ಚೇತನ್ ವಿರುದ್ಧ ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ಶಿವಾರ್ಜುನ್ ಫಿಲಂ ಚೇಂಬರ್ ಗೆ ದೂರು ನೀಡಿದ್ದಾರೆ.


ಅರ್ಜುನ್ ಸರ್ಜಾ ಅವರ  ‘ಪ್ರೇಮಬರಹ’ಚಿತ್ರದಲ್ಲಿ ನಟಿಸಲು ಮೊದಲು ಆಯ್ಕೆಯಾದ ನಟ ಚೇತನ್ ಅವರಿಗೆ ಅರ್ಜುನ್ ಸರ್ಜಾ ಅವರು 10 ಲಕ್ಷ ರೂ ಮುಂಗಡ ಹಣ ನೀಡಿದ್ದರು. ಆದರೆ ಚಿತ್ರೀಕರಣ ವೇಳೆ ಚೇತನ್ ಗೆ ಡೈಲಾಗ್ ಸರಿಯಾಗಿ ಹೇಳದ ಕಾರಣ ಅವರನ್ನು ಕೈಬಿಡಲಾಗಿತ್ತು. ಆದಕಾರಣ ಹಣವನ್ನು ಮರುಪಾವತಿಸಲು ಕ್ಕೆ ಚೇತನ ನಿರಾಕರಿಸಿದ ಕಾರಣ ಅಂದು ಅವರಿಗೆ ಲೀಗಲ್ ನೋಟಿಸ್ ಕೂಡ ರವಾನೆ ಮಾಡಲಾಗಿತ್ತು.


ಆದರೆ ಈಗ ಮುಂಗಡ ಹಣವನ್ನ ವಾಪಸ್ ಕೊಡದೇ ಚೇತನ್ ಸತಾಯಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ಅವರ ಮ್ಯಾನೇಜರ್ ಶಿವಾರ್ಜುನ್ ಈ ಹಣವನ್ನ ವಾಪಸ್ ಕೊಡಿಸುವಂತೆ ಫಿಲಂ ಚೇಂಬರ್ ಗೆ ದೂರು ಸಲ್ಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಪತ್ನಿ ನಾಗರತ್ನಗೆ ವಿಚ್ಚೇದನ ನೀಡಲು ಮುಂದಾದ ದುನಿಯಾ ವಿಜಯ್