Select Your Language

Notifications

webdunia
webdunia
webdunia
webdunia

ಸಿನಿಮಾ ಅವಕಾಶಕ್ಕಾಗಿ ತಿಮ್ಮಪ್ಪನ ಮೊರೆ ಹೋದ ಶ್ರೀಯಾ..!

ಸಿನಿಮಾ ಅವಕಾಶಕ್ಕಾಗಿ ತಿಮ್ಮಪ್ಪನ ಮೊರೆ ಹೋದ ಶ್ರೀಯಾ..!
ತಿರುಪತಿ , ಶನಿವಾರ, 26 ಆಗಸ್ಟ್ 2017 (18:49 IST)
ತೆಲುಗಿನ ಖ್ಯಾತ ನಟಿ ಶ್ರೀಯಾ ಸರಣ್ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ. ಇವತ್ತು ಬೆಳ್ಳಂ ಬೆಳಗ್ಗೆ ಸುಪ್ರಭಾತ ಪೂಜೆಯಲ್ಲಿ ಭಾಗವಹಿಸಿದ ಶ್ರೀಯ ತಿಮ್ಮಪ್ಪನಿಗೆ ಪ್ರಾರ್ಥನೆ ಸಲ್ಲಿಸಿದರು.

ಟಿಟಿಡಿ ಸಿಬ್ಬಂದಿ ಶ್ರೀಯಾ ದರ೵ಸನಕ್ಕೆ ವ್ಯವಸ್ತೆ ಮಾಡಿದ್ದರು. ಬಳಿಕ ತೀರ್ಥ ಪ್ರಸಾದ ನೀಡಿ ಕಳುಹಿಸಿದ್ದಾರೆ. ಈ ಸಂದರ್ಭ ಶ್ರೀಯಾ ಸರಣ್ ಮತ್ತಷ್ಟು ಸ್ಲಿಮ್ ಆಗಿ ಕಾಣಿಸಿಕೊಂಡರು. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹೊಸದರಲ್ಲಿ ಕೈತುಂಬಾ ಕೆಲಸದ ಜೊತೆ ಬ್ಯುಸಿಯಾಗಿರುತ್ತಿದ್ದ ಶ್ರೀಯಾಗೆ ಸದ್ಯ ಯಾವುದೇ ಚಿತ್ರಗಳಿಲ್ಲ ಎನ್ನಲಾಗಿದೆ.

ಮೂರು ತಿಂಗಳಿಗೊಮ್ಮೆ ತಿರುಪತಿಗೆ ಭೇಟಿ ನೀಡುವ ಶ್ರೀಯಾ ಸರಣ್ ಯಾವಾಗಲೂ ನಗು ನಗುತ್ತಾ ಇರುತ್ತಿದ್ದರು. ಆದರೆ, ಈ ಬಾರಿ ಅವರ ಮುಖದಲ್ಲಿ ನಗು ಮಾಯವಾಗಿತ್ತು. ಯಾವುದೇ ಅವಕಾಶಗಳಿಲ್ಲದೆ ಬೇಸರಗೊಂಡಿರುವ ಶ್ರೀಯಾ ಸಪ್ಪೆ ಮೊರೆ ಹಾಕಿಕೊಂಡಿದ್ದರು. ಹೀಗಾಗಿ, ಚಿತ್ರರಂಗದಲ್ಲಿ ಅವಕಾಶ ಸಿಗಲು ತಿಮ್ಮಪ್ಪನ ಕೃಪೆಗಾಗಿ ಭೇಟಿ ನಿಡಿದ್ದರು. ಮ಻ಧ್ಯಮಗಳ ಪ್ರಶ್ನೆಗೂ ಶ್ರೀಯಾ ಪ್ರತಿಕ್ರಿಯಿಸಲಿಲ್ಲ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಾಟ್ ನಟಿ ಟಬು ಕೆಂಡಾಮಂಡಲವಾಗಿದ್ದೇಕೆ ಗೊತ್ತಾ..?