Select Your Language

Notifications

webdunia
webdunia
webdunia
webdunia

ಇಡಿ ದಾಳಿ ಬೆನ್ನಲ್ಲೇ ದೇವರ ಮೊರೆ ಹೋಗುತ್ತಿರುವ ಶಿಲ್ಪಾ ಶೆಟ್ಟಿ

ಇಡಿ ದಾಳಿ ಬೆನ್ನಲ್ಲೇ ದೇವರ ಮೊರೆ ಹೋಗುತ್ತಿರುವ ಶಿಲ್ಪಾ ಶೆಟ್ಟಿ

Sampriya

ಬೆಂಗಳೂರು , ಬುಧವಾರ, 8 ಮೇ 2024 (14:30 IST)
Photo Courtesy X
ಬೆಂಗಳೂರು:  ಕರಾವಳಿ ಬೆಡಗಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಈಚೆಗೆ ತಮ್ಮ ಕುಟುಂಬದೊಂದಿಗೆ ಮಂಗಳೂರಿಗೆ ಬಂದು ದೈವ ಕೋಲ, ನಾಗಮಂಡಲದಲ್ಲಿ ಭಾಗಿಯಾದ ಬೆನ್ನಲ್ಲೇ ಇದೀಗ ಕಾಮಕ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಪತಿ ರಾಜ್ ಕುಂದ್ರಾ ಹಾಗೂ ಶಿಲ್ಪಾ ಅವರ  98 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡ ಬೆನ್ನಲ್ಲೇ ಇದೀಗ ದೇವರ ಮೊರೆ ಹೋಗಿದ್ದಾರೆ.

ಅಸ್ಸಾಂಗೆ ತಾಯಿಯೊಂದಿಗೆ  ತೆರಳಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕಾಮಕ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.  ಆಕೆಯ ಅಸ್ಸಾಂ ಭೇಟಿಯ ಚಿತ್ರಗಳು ಈಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ.

ದೇವಸ್ಥಾನಕ್ಕೆ ಭೇಟಿಕೊಟ್ಟಿರುವ ಫೋಟೋಗಳನ್ನು ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನೂ ಕಳೆದ ವಾರ ತಮ್ಮ ಮಕ್ಕಳು ಹಾಗೂ ತಾಯಿಯೊಂದಿಗೆ ಮಂಗಳೂರಿಗೆ ಬಂದು ದೈವ ಕೋಲ, ನಾಗಮಂಡಲದಲ್ಲಿ ಭಾಗವಹಿಸಿ, ಆಶೀರ್ವಾದರು ಪಡೆದರು.

Share this Story:

Follow Webdunia kannada

ಮುಂದಿನ ಸುದ್ದಿ

ಅದ್ಧೂರಿಯಾಗಿ ನಡೆಯಲಿದೆ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಮದುವೆ, ದಿನಾಂಕ ಬಹಿರಂಗ