Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಯಶ್ ಬೆಂಗಾವಲು ಪಡೆಯ ಅವಾಂತರ: ಯುವಕನ ಕಾಲ ಮೇಲೆ ಹರಿದ ಕಾರು

Yash

Krishnaveni K

ಬಳ್ಳಾರಿ , ಗುರುವಾರ, 29 ಫೆಬ್ರವರಿ 2024 (15:08 IST)
ಬಳ್ಳಾರಿ: ಇಂದು ಬಳ್ಳಾರಿಯ ಅಮೃತೇಶ್ವರ ದೇವಾಲಯದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಬಂದಿದ್ದ ರಾಕಿಂಗ್ ಸ್ಟಾರ್  ಯಶ್ ಅವರ ಬೆಂಗಾವಲು ಪಡೆಯ ವಾಹನ ಅಭಿಮಾನಿ ಯುವಕನ ಕಾಲ ಮೇಲೆ ಹರಿದಿದೆ.

ಯಶ್ ಬರುತ್ತಾರೆಂದರೆ ಅಲ್ಲಿ ಅಭಿಮಾನಿಗಳ ಸಾಗರವೇ ಸೇರುತ್ತದೆ. ಇಂದೂ ಕೂಡಾ ರಾಕಿ ಭಾಯಿ ಬರುವ ಸುದ್ದಿ ತಿಳಿದು ದೇವಾಲಯದ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಅವರನ್ನು ನೋಡಲೆಂದು ಅವರ ಜೊತೆ ಸೆಲ್ಫೀ ತೆಗೆದುಕೊಳ್ಳಲೆಂದು ಜನ ನುಗ್ಗಿ ಬಂದಿದ್ದಾರೆ.

ಯಶ್ ಕಾರು ಬರುತ್ತಿದ್ದಂತೇ ಅವರ ಕಾರಿಗೇ ಜನ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ದುರ್ಘಟನೆ ನಡೆದಿದೆ. ಯಶ್ ಕಾರನ್ನು ಬೆನ್ನು ಹತ್ತಿದ್ದ ಯುವಕನೊಬ್ಬನ ಮೇಲೆ ಬೆಂಗಾವಲು ಪಡೆಯ ವಾಹನ ಹರಿದಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಾಯ ಗಂಭೀರವಲ್ಲ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಯಶ್ ಬರ್ತ್ ಡೇ ದಿನ ಇಬ್ಬರು ಯುವಕರು ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದರು. ಅವರನ್ನು ನೋಡಲು ಯಶ್ ಬಂದಾಗ ಅವರ ಬೆಂಗಾವಲು ಪಡೆಯ ವಾಹನಕ್ಕೆ ದ್ವಿಚಕ್ರ ವಾಹನ ಢಿಕ್ಕಿಯಾಗಿ ಮತ್ತೊಬ್ಬ ಅಭಿಮಾನಿ ಸಾವನ್ನಪ್ಪಿದ್ದ. ಇದೀಗ ಮತ್ತೊಂದು ದುರ್ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಾರಿಯಲ್ಲಿ ರಾಕಿಂಗ್ ಸ್ಟಾರ್ ಯಶ್: ಟಾಕ್ಸಿಕ್ ಲುಕ್ ರಿವೀಲ್