Select Your Language

Notifications

webdunia
webdunia
webdunia
webdunia

ಮತ್ತೊಮ್ಮೆ ಕನ್ನಡಿಗರ ಕೋಪಕ್ಕೆ ಗುರಿಯಾದ ನಟಿ ರಶ್ಮಿಕಾ ಮಂದಣ್ಣ. ಕಾರಣವೇನು ಗೊತ್ತಾ?

ಮತ್ತೊಮ್ಮೆ ಕನ್ನಡಿಗರ ಕೋಪಕ್ಕೆ ಗುರಿಯಾದ ನಟಿ ರಶ್ಮಿಕಾ ಮಂದಣ್ಣ. ಕಾರಣವೇನು ಗೊತ್ತಾ?
ಬೆಂಗಳೂರು , ಭಾನುವಾರ, 18 ನವೆಂಬರ್ 2018 (11:48 IST)
ಬೆಂಗಳೂರು : ನಟಿ ರಶ್ಮಿಕಾ ಮಂದಣ್ಣ ಇದೀಗ ನಟ ವಿಜಯ್ ದೇವರಕೊಂಡ ವಿಚಾರಕ್ಕೆ ಟ್ವೀಟ್ ವೊಂದನ್ನು ಮಾಡಿ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದಾರೆ.

ಸ್ಯಾಂಡಲ್ ವುಡ್ ನ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಸ್ಯಾಂಡಲ್ ವುಡ್ ಕ್ಕಿಂತ ಹೆಚ್ಚಾಗಿ ಟಾಲಿವುಡ್ ನಲ್ಲಿಯೇ ಮಿಂಚುತ್ತಿದ್ದಾರೆ.  ಇತ್ತೀಚೆಗೆ ವಿಜಯ್ ದೇವರಕೊಂಡ ಅಭಿನಯದ ‘ಟಾಕ್ಸಿ ವಾಲಾ’ ಸಿನಿಮಾ ರಿಲೀಸ್ ಆಗಿದ್ದು, ರಶ್ಮಿಕಾ ಟಾಕ್ಸಿ ವಾಲಾ ಚಿತ್ರತಂಡಕ್ಕೆ ಶುಭಾಶಯ ಹೇಳಿ , ಎಲ್ಲರು ಈ ಸಿನಿಮಾವನ್ನ ನೋಡುವಂತೆ ಮನವಿ ಮಾಡಿದ್ದಾರೆ.

 

ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಕೇವಲ ತೆಲುಗು ಚಿತ್ರಕ್ಕೆ ಶುಭಾಶಯ ತಿಳಿಸುವ ರಶ್ಮಿಕಾ ಕನ್ನಡ ಸಿನಿಮಾಗಳು ರಿಲೀಸ್ ಆದಾಗ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಕೋಪದಿಂದ ಕನ್ನಡ ಮರಿಬೇಡಿ ಮೇಡಂ , ನೀವು ಕರ್ನಾಟಕದಲ್ಲಿ ಬೆಳೆದಿದ್ದಿರಿ. ಇನ್ನುಮುಂದೆ ಕನ್ನಡ ಚಿತ್ರಗಳಲ್ಲಿ ನಟಿಸಬೇಡಿ ಎಂದು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಾಧಿಕಾ ಪಂಡಿತ್ ಗೆ ಇಂದು ಸೀಮಂತದ ಸಂಭ್ರಮ