Select Your Language

Notifications

webdunia
webdunia
webdunia
webdunia

ನೇಹಾ ಪರಿಸ್ಥಿತಿಯ ಯಾವ ಧರ್ಮದವರಿಗೂ ಬರಬಾರದು: ರಚಿತಾ ರಾಂ

Rachitha Ram

Krishnaveni K

ಬೆಂಗಳೂರು , ಶನಿವಾರ, 20 ಏಪ್ರಿಲ್ 2024 (12:33 IST)
Photo Courtesy: Instagram
ಬೆಂಗಳೂರು: ಹುಬ್ಬಳ್ಳಿಯ ಕಾರ್ಪೋರೇಟರ್ ಪುತ್ರಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಚಿತಾ ರಾಂ ಸೋಷಿಯಲ್ ಮೀಡಿಯಾ ಮೂಲಕ ಖಂಡನೆ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟ ಧ‍್ರುವ ಸರ್ಜಾ ಸೋಷಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯಿಸಿದ್ದು, ತಪ್ಪಿತಸ್ಥರಿಗೆ ಶೀಘ್ರವೇ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ. ಧ್ರುವ ಮೊದಲನೆಯವರಾಗಿ ಕಾಮೆಂಟ್ ಮಾಡಿದ್ದರು. ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದೀಗ ಜಸ್ಟೀಸ್ ಫಾರ್ ನೇಹಾ ಎಂಬ ಹ್ಯಾಶ್ ಟ್ಯಾಗ್ ನಡಿಯಲ್ಲಿ ಟ್ರೆಂಡ್ ಆಗುತ್ತಿದೆ. ಅದರಂತೆ ನಟಿ ರಚಿತಾ ರಾಂ ಕೂಡಾ ಸೋಷಿಯಲ್ ಮೀಡಿಯಾ ಮೂಲಕ ಘಟನೆ ಬಗ್ಗೆ ಖೇದವ್ಯಕ್ತಪಡಿಸಿದ್ದಾರೆ. ‘ಜಾತಿ ಧರ್ಮ, ಯಾವುದೇ ಆಗಿರಲಿ, ಮೊದಲು ನಾವು ಮಾನವರು. ನಾನು ಈ ಪೋಸ್ಟ್ ಹಾಕಲು ಕಾರಣ ಆಕೆಗೆ ಆಗಿರುವ ಅನ್ಯಾಯ. ತಪ್ಪು ಯಾರೇ ಮಾಡಿದರು ತಪ್ಪೆ. ಸರ್ಕಾರಕ್ಕೆ ನನ್ನ ಒಂದು ಮನವಿ. ರಾಜಕೀಯ ಆಯಾಮದಲ್ಲಿ ಈ ವಿಷಯವನ್ನು ತರಬೇಡಿ, ಆಗಿರೋದು ಅನ್ಯಾಯ, ಈಗ ನ್ಯಾಯ ಬೇಕಾಗಿದೆ ಅಷ್ಟೆ. ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನ ಸಾಮಾನ್ಯರ ಕೈಗೆ ಒಪ್ಪಿಸಿ’ ಎಂದು ಬರೆದುಕೊಂಡಿದ್ದಾರೆ.

ಇನ್ನು ನಟಿ ರಕ್ಷಿತಾ ಪ್ರೇಮ್ ಕೂಡಾ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬನನ್ನು ನೀವು ಪ್ರೀತಿಸುತ್ತಿಲ್ಲ ಎಂದಾದರೆ ಕೊಲೆಯೇ ಮಾಡಿಬಿಡೋದಾ? ನಾವು ಮೊದಲು ಪೋಷಕರಾಗಿ ನಮ್ಮ ಗಂಡು ಮಕ್ಕಳಿಗೆ ತಿರಸ್ಕಾರವನ್ನು ಸ್ವೀಕರಿಸುವ ಮನೋಗುಣವನ್ನು ಹೇಳಿಕೊಡಬೇಕು. ಇದು ನಿಜಕ್ಕೂ ಹೇಯ ಕೃತ್ಯ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೇಹಾ ಹತ್ಯೆ ಖಂಡಿಸಿದವರು ನೀವು ಮಾತ್ರ: ಧ್ರುವ ಸರ್ಜಾಗೆ ನೆಟ್ಟಿಗರ ಮೆಚ್ಚುಗೆ