Select Your Language

Notifications

webdunia
webdunia
webdunia
webdunia

ಅಡ್ವಾನ್ಸ್ ತೆಗೆದುಕೊಂಡು ಕೈ ಎತ್ತಿದ್ರಾ ತಮಿಳು ನಟ ಧನುಷ್? ನಿಷೇಧದ ಭೀತಿಯಲ್ಲಿ ನಟ

ಅಡ್ವಾನ್ಸ್ ತೆಗೆದುಕೊಂಡು ಕೈ ಎತ್ತಿದ್ರಾ ತಮಿಳು ನಟ ಧನುಷ್? ನಿಷೇಧದ ಭೀತಿಯಲ್ಲಿ ನಟ
ಚೆನ್ನೈ , ಭಾನುವಾರ, 2 ಜುಲೈ 2023 (20:17 IST)
Photo Courtesy: Twitter
ಚೆನ್ನೈ: ತಮಿಳು ಸ್ಟಾರ್ ನಟ ಧನುಷ್ ವಿರುದ್ಧ ನಿರ್ಮಾಪಕರ ಸಂಘ ಸಿಡಿದೆದ್ದಿದೆ. ತಮಿಳು ಚಿತ್ರರಂಗದಿಂದ ನಿಷೇಧ ಹೇರುವ ಎಚ್ಚರಿಕೆ ನೀಡಿದ್ದಾರೆ. ಅಷ್ಟಕ್ಕೂ ಇದಕ್ಕೆ ಕಾರಣವೇನು?

ಧನುಷ್ ಗೆ ಕೇವಲ ತಮಿಳು ಮಾತ್ರವಲ್ಲ ಪರಭಾಷೆಗಳಲ್ಲೂ ಬೇಡಿಕೆಯಿದೆ. ಹಾಲಿವುಡ್ ನಲ್ಲೂ ನಟಿಸಿದ ಖ್ಯಾತಿ ಅವರದ್ದು. ಆದರೆ ಇತ್ತೀಚೆಗೆ ತಮಿಳು ನಿರ್ಮಾಪಕರೊಬ್ಬರಿಂದ ಅಡ್ವಾನ್ಸ್ ಪಡೆದು ಇದೀಗ ಡೇಟ್ಸ್ ಕೊಡದೇ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ.

ಅತ್ತ ಡೇಟ್ಸ್ ಕೊಡಲ್ಲ, ಇತ್ತ ಮುಂಗಡವನ್ನೂ ಮರಳಿಸದೇ ಸತಾಯಿಸುತ್ತಿದ್ದಾರೆ ಎಂದು ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಬ್ಯಾನ್ ಎಚ್ಚರಿಕೆ ನೀಡಿ ಧನುಷ್ ಗೆ ನೋಟಿಸ್ ನೀಡಲಾಗಿದೆ. ಇದಕ್ಕೆ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾನ್ ಇಂಡಿಯಾ ಸಾಲಿಗೆ ಗೋಲ್ಡನ್ ಸ್ಟಾರ್ ಗಣೇಶ್