Select Your Language

Notifications

webdunia
webdunia
webdunia
webdunia

ನಿರ್ದೇಶಕ ಪ್ರೇಮ್ ವಿರುದ್ಧ ವಂಚನೆ ಆರೋಪ ಮಾಡಿದ ನಿರ್ಮಾಪಕ ಶ್ರೀನಿವಾಸ್

ನಿರ್ದೇಶಕ ಪ್ರೇಮ್ ವಿರುದ್ಧ ವಂಚನೆ ಆರೋಪ ಮಾಡಿದ ನಿರ್ಮಾಪಕ ಶ್ರೀನಿವಾಸ್
ಬೆಂಗಳೂರು , ಬುಧವಾರ, 21 ನವೆಂಬರ್ 2018 (08:26 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪ್ರೇಮ್ ವಿರುದ್ಧ ನಿರ್ಮಾಪಕ ಶ್ರೀನಿವಾಸ್ ವಂಚನೆ ಆರೋಪ ಮಾಡಿದ್ದಾರೆ.


ನಗರದಲ್ಲಿ ನಡೆದ ತಾರಕಾಸುರ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ್,’ ಅವರು ಜೋಗಿ ಪ್ರೇಮ್ ಅಲ್ಲ ಟೋಪಿ ಪ್ರೇಮ್. ನಿರ್ದೇಶಕ ಪ್ರೇಮ್ ನನ್ನ ಬಳಿ ಸಿನಿಮಾ ಮಾಡುತ್ತೇನೆ ಎಂದು ಹೇಳಿ 9 ವರ್ಷದ ಹಿಂದೇ 10 ಲಕ್ಷ ರೂ. ಮುಂಗಡ ಹಣ ಪಡೆದುಕೊಂಡಿದ್ದರು. ಆದರೆ ಇನ್ನು ಹಣ ನೀಡದೆ ಅದೇ ಟೋಪಿ ಹಾಕಿಕೊಂಡು ಓಡಾಡುತ್ತಿದ್ದಾರೆ ಎಂದು ಹೇಳಿದ್ದಾರೆ.


ಜೋಗಿ ಸಿನಿಮಾ ವೇಳೆಯೇ 72 ಲಕ್ಷ ರೂ. ನೀಡಿ ನಾನು ಅವರ ಸಿನಿಮಾದ ತೆಲುಗು ಭಾಷೆಯ ರೈಟ್ಸ್ ಪಡೆದೆ. ಬಳಿಕ ಅವರೊಂದಿಗೆ ಸಿನಿಮಾ ಮಾಡಲು ಹಣ ನೀಡಿದ್ದೆ. ಇತ್ತೀಚಿಗೆ ನನ್ನ ಆರೋಗ್ಯ ಸರಿ ಇಲ್ಲದ ಕಾರಣ ಅವರ ಬಳಿ ಹಣ ಕೇಳಲು ಮನೆಗೆ ತೆರಳಿದ್ದೆ. ಆಗ 2.50 ಲಕ್ಷ ರೂ. ನೀಡಿದರು. ಆದರೆ ಮುಂದಿನ ದಿನಗಳಲ್ಲಿ ಬಾಕಿ ಹಣ ಕೇಳಿದರೆ ನೀಡಿಲ್ಲ. ಅಷ್ಟೇ ಅಲ್ಲದೇ ಹಣ ಕೊಡುತ್ತೇನೆ ಎಂದು ಹೇಳಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

'ಮೀಟೂ' ಆಂದೋಲನದ ಬಗ್ಗೆ ಈ ರೀತಿ ಮಾತನಾಡಿ ವಿವಾದಕ್ಕೆ ಕಾರಣರಾದ ನಟಿ ಪ್ರೀತಿ ಝಿಂಟಾ