Select Your Language

Notifications

webdunia
webdunia
webdunia
webdunia

ನೇಹಾ ಹತ್ಯೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಪ್ರಕಾಶ್ ರಾಜ್, ಚೇತನ್ ಗೆ ಪ್ರಥಮ್ ಕ್ಲಾಸ್

Pratham

Krishnaveni K

ಬೆಂಗಳೂರು , ಭಾನುವಾರ, 21 ಏಪ್ರಿಲ್ 2024 (14:45 IST)
Photo Courtesy: facebook
ಬೆಂಗಳೂರು: ಹುಬ್ಬಳ್ಳಿಯಲ್ಲಿ ಅನ್ಯಕೋಮಿನ ಫಯಾಜ್ ನಿಂತ ಹತಳಾದ ನೇಹಾ ಬಗ್ಗೆ ಸೆಲೆಬ್ರಿಟಿಗಳೂ ಈಗ ಧ್ವನಿಯೆತ್ತಲಾರಂಭಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಈಗ ನೇಹಾ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಪ್ರಯತ್ನ ಮಾಡಿದ್ದಾರೆ.

ಹುಬ್ಬಳ್ಳಿಯ ನೇಹಾ ನಿವಾಸಕ್ಕೆ ಭೇಟಿ ನೀಡಿದ ಪ್ರಥಮ್ ನೇಹಾ ತಾಯಿ ಜೊತೆ ಮಾತನಾಡಿದ್ದಾರೆ. ಧೈರ್ಯವಾಗಿರುವಂತೆ ಸಾಂತ್ವನ ನೀಡಿ ಬಂದಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪ್ರಥಮ್ ಸದಾ ಪ್ರಗತಿಪರ ವಿಚಾರಗಳ ಕುರಿತು ಮಾತನಾಡುವ ಚೇತನ್ ಅಹಿಂಸಾ, ಪ್ರಕಾಶ್ ರಾಜ್ ಇಂದು ಯಾಕೆ ಮಾತನಾಡುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

ಎಲ್ಲದಕ್ಕೂ ಧ್ವನಿಯೆತ್ತುವ, ಮಾತೆತ್ತಿದರೆ ನರೇಂದ್ರ ಮೋದಿಯವರನ್ನು ಪ್ರಶ್ನಿಸುವವರು ಈಗ ರಾಜ್ಯದ ಮಗಳು ಮೃತಪಟ್ಟಿದ್ದಾರೆ. ಆಕೆಯ ಬಗ್ಗೆ ಯಾಕೆ ನೀವು ಧ್ವನಿ ಎತ್ತುತ್ತಿಲ್ಲ? ಬರೀ ಅಹಿಂಸಾ ಎಂದು ಹೆಸರಿಟ್ಟುಕೊಂಡರೆ ಸಾಲದು. ಇಂತಹ ಘಟನೆ ಬಗ್ಗೆ ಧ‍್ವನಿಯೆತ್ತಬೇಕು. ಕೇವಲ ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡುವುದಲ್ಲ ಎಂದು ಪ್ರಕಾಶ್ ರಾಜ್ ಮತ್ತು ಚೇತನ್ ಗೆ ಪರೋಕ್ಷವಾಗಿ ಕುಟುಕಿದ್ದಾರೆ.

ಈ ನಡುವೆ ಫಯಾಜ್ ಮತ್ತು ನೇಹಾ ಹೆಸರಿನಲ್ಲಿ ಸೋಷಿಯಲ್ ಮೀಡಿಯಾ ಖಾತೆ ತೆರೆದು ಜಸ್ಟಿಸ್ ಫಾರ್ ಲವ್ ಎಂದು ಬರೆದ ಕಿಡಿಗೇಡಿಗಳಿಗೂ ಪ್ರಥಮ್ ಜಾಡಿಸಿದ್ದಾರೆ. ಜಸ್ಟಿಸ್ ಫಾರ್ ಲವ್ ಎಂದರೆ ಅರ್ಥವೇನು? ಇಲ್ಲಿ ನ್ಯಾಯ ಸಿಗಬೇಕಾಗಿರುವುದು ನೇಹಾಗೆ ಎಂದು ಕಿಡಿ ಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಯಕ ವಿಜಯ್ ಪ್ರಕಾಶ್ ಗೆ ಗೌರವ ಡಾಕ್ಟರೇಟ್