Select Your Language

Notifications

webdunia
webdunia
webdunia
webdunia

ಮಾಸ್ತಿ ಗುಡಿ ಶೂಟಿಂಗ್ ವೇಳೆ ಮೃತಪಟ್ಟ ಉದಯ್, ಅನಿಲ್ ಕುಟುಂಬಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ನೆರವು

ಮಾಸ್ತಿ ಗುಡಿ ಶೂಟಿಂಗ್ ವೇಳೆ ಮೃತಪಟ್ಟ ಉದಯ್, ಅನಿಲ್ ಕುಟುಂಬಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ನೆರವು
Bangalore , ಮಂಗಳವಾರ, 22 ನವೆಂಬರ್ 2016 (10:46 IST)
ಬೆಂಗಳೂರು: ಮಾಸ್ತಿ ಗುಡಿ ಸಿನಿಮಾದ ಕ್ಲೈಮ್ಯಾಕ್ಸ್  ಚಿತ್ರೀಕರಣದ ವೇಳೆ ಅಚಾತುರ್ಯದಿಂದಾಗಿ ಸಾವನ್ನಪ್ಪಿದ ಖಳನಟರಾದ ಉದಯ್ ಮತ್ತು ಅನಿಲ್ ಕುಟುಂಬದವರಿಗೆ ಸಂಸದ ರಾಜೀವ್ ಚಂದ್ರಶೇಖರ್ ನೆರವಿಗೆ ಮುಂದಾಗಿದ್ದಾರೆ.

ಇಬ್ಬರೂ ನಟರ ಕುಟುಂಬದವರಿಗೆ ತಲಾ 2 ಲಕ್ಷ ರೂ. ಪರಿಹಾರ ಹಣ ನೀಡಿದ್ದಾರೆ. ಸದಾ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಚಂದ್ರಶೇಖರ್ ಮತ್ತೊಮ್ಮೆ ಸಂತ್ರಸ್ತ ಕುಟುಂಬದ ನೆರವಿಗೆ ಬಂದಿದ್ದಾರೆ. ನಿನ್ನೆಯಷ್ಟೇ ಉದಯ್ ಕುಟುಂಬದವರು ನಮಗೆ ಸರ್ಕಾರದಿಂದಾಗಲೀ ಚಿತ್ರರಂಗದವರಿಂದಾಗಲೀ ಯಾವುದೇ  ಪರಿಹಾರ ಹಣ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದರು.

ಆದರೆ ಈ ಹಣವನ್ನು ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕೈಗೊಪ್ಪಿಸಿದ್ದು, ಅವರು ಖಳನಟರ ಕುಟುಂಬದವರಿಗೆ ಹಸ್ತಾಂತರಿಸಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ನಿರಂಜನ್ ದೇಶಪಾಂಡೆಗೆ ನವರಸನಾಯಕ ಜಗ್ಗೇಶ್ ಸಪೋರ್ಟ್!