Select Your Language

Notifications

webdunia
webdunia
webdunia
webdunia

ವಿಜಯ್ ದೇವರಕೊಂಡ ಭೇಟಿಯಾದ ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್... ಹೊಸ ಪ್ರಾಜೆಕ್ಟ್‌ ಎಂದಾ ಅಭಿಮಾನಿಗಳು

Prashanth Neel

Sampriya

ಹೈದರಾಬಾದ್‌ , ಬುಧವಾರ, 24 ಏಪ್ರಿಲ್ 2024 (20:04 IST)
Photo Courtesy X
ಸಲಾರ್ ಸಿನಿಮಾದ ನಂತರ ನಿರ್ದೇಶಕ ಪ್ರಶಾಂತ್ ನೀಲ್ ಅವರು ಜೂನಿಯರ್ ಎನ್‌ಟಿಆರ್ ಜತೆ  ಹೊಸ ಸಿನಿಮಾ ಮಾಡಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.  ಆದರೆ ಇದೀಗ ಕೆಜಿಎಫ್ ನಿರ್ದೇಶಕ ಮತ್ತೋರ್ವ ಟಾಲಿವುಡ್ ಸ್ಟಾರ್ ನಟನಿಗೆ  ಆ್ಯಕ್ಷನ್ ಕಟ್ ಹೇಳಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.

ಹೌದು ಈ ರೀತಿ ಸುದ್ದಿ ಹಬ್ಬಲು ವಿಜಯ್ ದೇವರಕೊಂಡ ಹಾಗೂ ಪ್ರಶಾಂತ್ ನೀಲ್ ಅವರ ಭೇಟಿಯೇ ಇದಕ್ಕೆಲ್ಲ ಕಾರಣ. ಇವರಿಬ್ಬರ ಭೇಟಿ ಟಾಲಿವುಡ್ ಅಂಗಳದಲ್ಲಿ ಹಾಗೂ ಅವರ ಅಭಿಮಾನಿಗಳಲ್ಲಿ ಹೊಸ ಊಹಾಪೋಹಗೆ ಕಾರಣವಾಗಿದೆ.

ಆದರೆ ಇವರಿಬ್ಬರ ಭೇಟಿ ಕೇವಲ ಭೋಜನಕ್ಕೆ ಸೀಮಿತ ಎಂದು ಹೇಳಿದ್ದರು, ಟಾಲಿವುಡ್ ಅಂಗಳದಲ್ಲಿ ಮಾತ್ರ ಇವರಿಬ್ಬರು ಹೊಸ ಪ್ರಾಜೆಕ್ಟ್‌ನಲ್ಲಿ ತೊಡಗಿದ್ದಾರೆ ಎಂದು ವದಂತಿಗಳು ಹರಿದಾಡುತ್ತಿದೆ.

ಪ್ರಶಾಂತ್ ನೀಲ್ ಈಗಾಗಲೇ ಪ್ರಭಾಸ್ ಜೊತೆಗೆ "ಸಲಾರ್: ಭಾಗ 2" ಮತ್ತು ಎನ್‌ಟಿಆರ್‌ನೊಂದಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ.

ಇನ್ನೂ ಕೆಲವರು ಪ್ರಶಾಂತ್ ನೀಲ್ ಅಭಿನಯದ "ಸಲಾರ್: ಭಾಗ 2" ಅಥವಾ ಎನ್‌ಟಿಆರ್ ಅವರ ಹೊಸ ಚಿತ್ರದಲ್ಲಿ ವಿಜಯ್ ದೇವರಕೊಂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂದು ಗೆಸ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು