Select Your Language

Notifications

webdunia
webdunia
webdunia
webdunia

ಕಾಟೇರ ಸಿನಿಮಾದಲ್ಲಿ ಮೇಲ್ವರ್ಗಕ್ಕೆ ಅವಮಾನ: ಕೇಳಿಬಂತು ಆಕ್ಷೇಪ

ಕಾಟೇರ ಸಿನಿಮಾದಲ್ಲಿ ಮೇಲ್ವರ್ಗಕ್ಕೆ ಅವಮಾನ: ಕೇಳಿಬಂತು ಆಕ್ಷೇಪ
ಬೆಂಗಳೂರು , ಬುಧವಾರ, 3 ಜನವರಿ 2024 (11:07 IST)
ಬೆಂಗಳೂರು: ನಟ ದರ್ಶನ್ ನಾಯಕರಾಗಿರುವ ತರುಣ್ ಸುದೀರ್ ನಿರ್ದೇಶನದ ಕಾಟೇರ ಸಿನಿಮಾದಲ್ಲಿ ಮೇಲ್ವರ್ಗದ ಜನರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಸಿನಿಮಾದಲ್ಲಿ ಮೇಲ್ವರ್ಗದವರ ಮನೆಯಲ್ಲಿ ನಾಯಕ ತನ್ನ ಜೊತೆಗೆ ಬಂದಿದ್ದ ಹುಡುಗ ನೀರು ಕುಡಿದ ತಪ್ಪಿಗೆ ತಾನೇ ಏಟು ತಿನ್ನುವ ದೃಶ್ಯವಿದೆ. ಇಂತಹ ದೃಶ್ಯಗಳ ಬಗ್ಗೆ ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಟೇರ ಸಿನಿಮಾ ಎಲ್ಲಾ ಚೆನ್ನಾಗಿದೆ. ಆದರೆ ಇಂದಿರಾ ಗಾಂಧಿ ಕಾಲದಲ್ಲಿ ಮೇಲ್ವರ್ಗದವರು ಶೋಷಣೆ ಮಾಡಿದ್ದರು ಎಂಬುದನ್ನು ಅತಿಯಾಗಿ ಬಿಂಬಿಸಿ ಕೆಲವೊಂದು ವರ್ಗದವರನ್ನು ಅವಹೇಳನ ಮಾಡುವ ಉದ್ದೇಶವೇನಿದೆ ಎಂದು ಕೆಲವರು ಆಕ್ಷೇಪಿಸಿದ್ದಾರೆ.

ಈ ಹಿಂದೆ ತರುಣ್ ಸುಧೀರ್ ಸಹೋದರ ನಂದಕಿಶೋರ್ ನಿರ್ದೇಶನದ ಪೊಗರು ಸಿನಿಮಾದಲ್ಲೂ ಬ್ರಾಹ್ಮಣರಿಗೆ ಅವಮಾನ ಮಾಡಲಾಗಿತ್ತು ಎಂದು ದೂರು ದಾಖಲಾಗಿತ್ತು. ಇದೀಗ ತರುಣ್ ಸುಧೀರ್ ಕೂಡಾ ಇದೇ ರೀತಿ ಒಂದು ವರ್ಗಕ್ಕೆ ಅವಮಾನ ಮಾಡಿದ ಆಕ್ಷೇಪಕ್ಕೆ ಗುರಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಪಾನ್ ದುರಂತದಿಂದ ಕೂದಲಳೆಯಲ್ಲಿ ಪಾರಾದ ಜ್ಯೂ.ಎನ್ ಟಿಆರ್