Select Your Language

Notifications

webdunia
webdunia
webdunia
webdunia

ಮಾತಿನಿಂದಲೇ ಮತ್ತೆ ಕೆಟ್ಟ ನವರಸನಾಯಕ ಜಗ್ಗೇಶ್

Varthur Santhosh Jaggesh

Krishnaveni K

ಬೆಂಗಳೂರು , ಸೋಮವಾರ, 19 ಫೆಬ್ರವರಿ 2024 (09:22 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಮತ್ತೊಮ್ಮೆ ತಮ್ಮ ಮಾತಿನಿಂದಲೇ ವಿವಾದಕ್ಕೀಡಾಗಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಗ್ಗೆ ಬಳಸಿದ ಪದ ಈಗ ಅವರಿಗೇ ಮುಳುವಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿ ವರ್ತೂರು ಸಂತೋಷ್ ಕುರಿತಾಗಿ ‘ಕಿತ್ತೋದ್ ನನ್ಮಗ’ ಎಂಬ ಪದ ಬಳಿಸಿದ ಜಗ್ಗೇಶ್ ಗೆ ಈಗ ಪ್ರತಿಭಟನೆಯ ಬಿಸಿ ತಾಕಿದೆ. ರಂಗನಾಯಕ ಸಿನಿಮಾ ಕಾರ್ಯಕ್ರಮದಲ್ಲಿ ಜಗ್ಗೇಶ್, ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡುವಾಗ ವರ್ತೂರು ಸಂತೋಷ್ ಹೆಸರೆತ್ತದೇ ಪರೋಕ್ಷವಾಗಿ ಕಿತ್ತೋದ್ ನನ್ಮಗ ಎಂಬ ಪದ ಬಳಸಿದ್ದರು. ಇದು ಈಗ ವಿವಾದಕ್ಕೀಡಾಗಿದೆ.

ನನ್ನ ತಾಯಿ ಮಗ ಹುಲಿಯಂತಿರಲಿ ಎಂದು ಹುಲಿ ಉಗುರು ಉಡುಗೊರೆಯಾಗಿ ಕೊಟ್ಟಿದ್ದರು. ಅದು ಯಾವನೋ ಕಿತ್ತೋದ್ ನನ್ಮಗ ರಿಯಾಲಿಟಿ ಶೋನಲ್ಲಿ ಹುಲಿ ಉಗುರು ಹಾಕಿಕೊಂಡು ಸಿಕ್ಕಿಹಾಕಿಕೊಂಡುಬಿಟ್ಟ ಎಂದಿದ್ದರು. ವರ್ತೂರು ಸಂತೋಷ್ ಬಿಗ್ ಬಾಸ್ ಮನೆಗೆ ಹೋದ ಮೇಲೆ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೀಗಿರುವಾಗ ಅವರ ಬಗ್ಗೆ ಹಗುರ ಪದ ಬಳಸಿದ್ದು ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಜಗ್ಗೇಶ್ ಕ್ಷಮೆ ಯಾಚಿಸದಿದ್ದರೆ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ವರ್ತೂರು ಸಂತೋಷ್ ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ. ಆದರೆ ವರ್ತೂರು ಸಂತೋಷ್ ಮಾತ್ರ ‘ಅವರು ಹಿರಿಯರು. ಅವರ ಮಾತಿಗೆ ನಾನು ಪ್ರತಿಕ್ರಿಯಿಸಲ್ಲ. ಸುದೀಪಣ್ಣ ಹೇಳಿದ್ದರು ಕೆಲವೊಮ್ಮೆ ನಾವು ಪ್ರತಿಕ್ರಿಯಿಸುವುದು ಬೇಕಾಗಿಲ್ಲ, ನಮ್ಮ ಮೌನವೇ ಉತ್ತರವಾಗುತ್ತದೆ ಎಂದು. ಹಾಗೆಯೇ ನಾನೂ ಇರುತ್ತೇನೆ. ಕಾಲಾಯ ತಸ್ಮೈ ನಮಃ’ ಎಂದಿದ್ದರು.

ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಬಗ್ಗೆ ಮಾತನಾಡಿ ಜಗ್ಗೇಶ್ ಸಂಕಷ್ಟಕ್ಕೀಡಾಗಿದ್ದರು. ಕೊನೆಗೆ ದರ್ಶನ್ ಅವರೇ ಮಧ‍್ಯಪ್ರವೇಶಿಸಿ ತಮ್ಮ ಅಭಿಮಾನಿಗಳನ್ನು ಸುಮ್ಮನಾಗಿಸಬೇಕಾಯಿತು. ಈಗ ಮತ್ತೊಮ್ಮೆ ಮಾತಿನಿಂದಲೇ ಅವರು ವಿವಾದಕ್ಕೀಡಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟಾರ್ ಆದ್ರೂ ಬೇರು ಮರೆತಿಲ್ಲ! ಕಿರಾಣಿ ಅಂಗಡಿಗೆ ಬಂದು ಕುಲ್ಫೀ ಸವಿದ ಯಶ್-ರಾಧಿಕಾ