Select Your Language

Notifications

webdunia
webdunia
webdunia
webdunia

ಪ್ರವಾಹ ಪೀಡಿತ ಕೊಡಗಿಗೆ ಸ್ಯಾಂಡಲ್ ವುಡ್ ನೆರವಾಗಿದ್ದು ಹೇಗೆ ಗೊತ್ತಾ?

ಪ್ರವಾಹ ಪೀಡಿತ ಕೊಡಗಿಗೆ ಸ್ಯಾಂಡಲ್ ವುಡ್ ನೆರವಾಗಿದ್ದು ಹೇಗೆ ಗೊತ್ತಾ?
ಬೆಂಗಳೂರು , ಸೋಮವಾರ, 20 ಆಗಸ್ಟ್ 2018 (09:13 IST)
ಬೆಂಗಳೂರು: ಕೊಡಗಿನಲ್ಲಿ ಭಾರೀ ಮಳೆಯಿಂದಾಗಿ ಜನ ಜೀವನ ಸಂಕಷ್ಟದಲ್ಲಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಗಳೂ ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ.
 

ಕಿಚ್ಚ ಸುದೀಪ್, ಜಗ್ಗೇಶ್, ರಾಕಿಂಗ್ ಸ್ಟಾರ್ ಯಶ್, ಹರ್ಷಿಕಾ ಪೂಣಚ್ಚ, ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಸೇರಿದಂತೆ ಘಟಾನುಘಟಿ ತಾರೆಯರು ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ.

ಕಿಚ್ಚ ಸುದೀಪ್ ತಮ್ಮ ಅಭಿಮಾನಿ ಸಂಘದವರ ಮೂಲಕ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಯತ್ನಿಸಿದ್ದಾರೆ. ಕಿಚ್ಚನ ಅಭಿಮಾನಿ ಬಳಗ ಪ್ರವಾಹ ಪೀಡಿತರಿಗಾಗಿ 8000 ಚಪಾತಿ ಮತ್ತು ಪರಿಹಾರ ಸಾಮಗ್ರಿಗಳನ್ನು ಒದಗಿಸಿದೆ. ನವರಸನಾಯಕ ಜಗ್ಗೇಶ್ ತಮ್ಮ ಕುಟುಂಬದ ಪರವಾಗಿ ಅಗತ್ಯ ವಸ್ತುಗಳನ್ನು ನೀಡುತ್ತಿದ್ದಾರೆ.

ಇನ್ನು ರಾಕಿಂಗ್ ಸ್ಟಾರ್ ಯಶ್ ಕೂಡಾ ತಮ್ಮ ಅಭಿಮಾನಿ ಬಳಗದವರ ಮೂಲಕ ಸಹಾಯ ಹಸ್ತ ಚಾಚಿದ್ದಲ್ಲದೆ, ಸ್ಥಳೀಯರ ಶಾಸಕರೊಂದಿಗೆ ಸಂಪರ್ಕ ಸಾಧಿಸಿ ತಾವೇ ಖುದ್ದಾಗಿ ಹೋಗಿ ಸಹಾಯ ಮಾಡಲು ಸಾಧ್ಯವೇ ಎಂದೂ ಪ್ರಯತ್ನಿಸಿದ್ದಾರಂತೆ. ರಕ್ಷಿತ್ ಶೆಟ್ಟಿ ಕೂಡಾ ಇದೇ ರೀತಿ ಸಹಾಯವಾಣಿಗಳ ಮೂಲಕ ತಮ್ಮದೇ ರೀತಿಯಲ್ಲಿ ಪ್ರವಾಹರಿಗೆ ನೆರವಾಗುತ್ತಿದ್ದರೆ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸಂತ್ರಸ್ತರಿಗೆ ನೆರವಾಗಲು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದಾರೆ.

ಕೊಡಗಿನ ಇನ್ನೊಬ್ಬ ಪ್ರತಿಭೆ ಹರ್ಷಿಕಾ ಪೂಣಚ್ಚ ತಮ್ಮ ತಂಡದೊಂದಿಗೆ ನೇರವಾಗಿ ನಿರಾಶ್ರಿತರ ಕೇಂದ್ರಕ್ಕೆ ತೆರಳಿ ಅಗತ್ಯ ವಸ್ತುಗಳನ್ನು ಒದಗಿಸಲು ಸಜ್ಜಾಗಿದ್ದಾರೆ. ಇನ್ನು, ಚಾಲೆಂಜಿಂಗ್ ಸ್ಟಾರ್ ದರ್ಶನ್, ಶಿವರಾಜ್ ಕುಮಾರ್ ಕೂಡಾ ತಮ್ಮ ಅಭಿಮಾನಿಗಳ ಮೂಲಕ ತೆರೆ ಮರೆಯಲ್ಲೇ ಸಹಾಯಕ್ಕೆ ನಿಂತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದ ಸಂತ್ರಸ್ತರಿಗೆ ನೆರವು ನೀಡಿ ಎಂದಿದ್ದಕ್ಕೆ ಬಾಲಿವುಡ್ ತಾರೆಯರ ಮೇಲೆ ನೆಟ್ಟಿಗರು ಕೋಪಗೊಂಡಿದ್ಯಾಕೆ