Select Your Language

Notifications

webdunia
webdunia
webdunia
webdunia

ಲವ್ ನಿಂದ ನೊಂದ ತಮ್ಮ ಅಭಿಮಾನಿಗೆ ಕಿಚ್ಚನ ಸಲಹೆ ಏನು ಗೊತ್ತಾ?

ಲವ್ ನಿಂದ ನೊಂದ ತಮ್ಮ ಅಭಿಮಾನಿಗೆ  ಕಿಚ್ಚನ ಸಲಹೆ ಏನು ಗೊತ್ತಾ?
ಬೆಂಗಳೂರು , ಶನಿವಾರ, 19 ಮೇ 2018 (06:39 IST)
ಬೆಂಗಳೂರು : ನಟ  ಕಿಚ್ಚ ಸುದೀಪ್ ಅವರು ಲವ್ ನಿಂದ ನೊಂದ ತಮ್ಮ ಅಭಿಮಾನಿಯೊಬ್ಬರಿಗೆ ಸಾಂತ್ವನಾ ಹೇಳಿ ಲವ್ ಗುರು ಎನಿಸಿಕೊಂಡಿದ್ದಾರೆ.


ಕಿಚ್ಚ ಸುದೀಪ್ ಅವರ ಅಭಿಮಾನಿಯೊಬ್ಬರು ತಮ್ಮ ಪ್ರೀತಿಯನ್ನು ಕಳೆದುಕೊಂಡು ತಮ್ಮ ನೆಚ್ಚಿನ ನಟ ಸುದೀಪ್ ಅವರಲ್ಲಿ ಆ ನೋವನ್ನು ತೊಡಿಕೊಂಡಿದ್ದಾರೆ. `ಪ್ರೀತಿ ಮಾಡೋಕೆ ಆಸ್ತಿ, ಅಂತಸ್ತು, ಅಂದ ಹಾಗೂ ಚೆಂದ ಇವೆಲ್ಲಾ ಬೇಕಾ ಬಾಸ್. ಎಲ್ಲಾ ಬಿಟ್ಟು ಹುಚ್ಚನ ತರಹ ಪ್ರೀತಿಸಿದ್ದರು ಅರ್ಥನೇ ಮಾಡಿಕೊಳ್ಳುತ್ತಿಲ್ಲ. ಸ್ನೇಹ ಕಳೆದುಕೊಳ್ಳಬೇಕಾಗುತ್ತದೆ ಎಂದು ಸುಮ್ಮನೆ ನೋವು ಅನುಭವಿಸಿದ್ದೀನಿ. ಏನೂ ಮಾಡಬೇಕೆಂದು ತಿಳಿಯುತ್ತಿಲ್ಲ ಅಣ್ಣ. ಅವಳು ಇಲ್ಲದೇ ನನಗೆ ಇರೋಕೆ ಆಗಲ್ಲ’ ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ನಟ ಸುದೀಪ್ ಅವರು,’ ಒಂದು ಜೀವನ. ಒಂದು ಅವಕಾಶ. ಪ್ರೀತಿ ಎಂದರೆ ಕೊಡುವುದು ಹೊರತು ಅದನ್ನು ಕಿತ್ತುಕೊಳ್ಳುವುದ್ದಲ್ಲ. ನಿಮ್ಮ ಕುಟುಂಬಕ್ಕೆ ನೀವು ಒಳ್ಳೆಯವರಾಗಿರಿ. ಅಲ್ಲದೇ ನಿಮ್ಮ ಜೀವನದಲ್ಲಿರುವ ವ್ಯಕ್ತಿಗಳನ್ನು ಪ್ರೀತಿಯಿಂದ ನೋಡಿಕೊಳ್ಳಿ. ನಿಮ್ಮ ಜೀವನವನ್ನು ಅದ್ಭುತವಾಗಿರುವ ಹಾಗೆ ಮಾಡಿಕೊಳ್ಳಿ. ಸುಮ್ಮನೆ ನಿನ್ನ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ’ ಎಂದು ಸುದೀಪ್ ಅವರು ರೀ-ಟ್ವೀಟ್ ಮಾಡಿ ಧೈರ್ಯ ತುಂಬಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಗೆಳೆಯ ದರ್ಶನ್ ಜೊತೆಗೆ ಕಳೆದ ಸುಮಧುರ ದಿನಗಳನ್ನು ಮೆಲುಕು ಹಾಕಿದ ನಟ ಸುದೀಪ್