Select Your Language

Notifications

webdunia
webdunia
webdunia
webdunia

ಬೇಸರಗೊಂಡ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸುದೀಪ್ ನೀಡಿದ ಸಲಹೆಯೇನು ಗೊತ್ತಾ?

ಬೇಸರಗೊಂಡ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸುದೀಪ್ ನೀಡಿದ ಸಲಹೆಯೇನು ಗೊತ್ತಾ?
ಬೆಂಗಳೂರು , ಸೋಮವಾರ, 2 ಜುಲೈ 2018 (12:44 IST)
ಬೆಂಗಳೂರು : ನಟ ಕಿಚ್ಚ ಸುದೀಪ್ ಹಾಗೂ ನಟ ಶಿವರಾಜ್ ಕುಮಾರ್ ಅವರ ‘ದಿ ವಿಲನ್’ ಚಿತ್ರದ ಎರಡು ಟೀಸರ್ ಬಿಡುಗಡೆಯಾಗಿ ಸಖತ್ ಸೌಡ್ ಮಾಡುತ್ತಿದೆ. ಅದರಲ್ಲೂ ಕಿಚ್ಚ ಸುದೀಪ್ ಅವರ ಟೀಸರ್ ಗೆ ಹೆಚ್ಚು ಪ್ರತಿಕ್ರಿಯೆ ದೊರೆತಿದೆ. ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ  ಶಿವರಾಜ್ ಕುಮಾರ್ ಅಭಿಮಾನಿಗಳ ಬಗ್ಗೆ ಸುದೀಪ್ ಬೇಸರಗೊಂಡಿದ್ದಾರೆ.


‘ದಿ ವಿಲನ್’ ಚಿತ್ರದ ಕಿಚ್ಚ ಸುದೀಪ್ ಅವರ ಟೀಸರ್  ಹೆಚ್ಚು ವೀವ್ಸ್​ ನ್ನು ಪಡೆದಿದ್ದು, ಟ್ವಿಟರ್​ನಲ್ಲಿ ಸುದೀಪ್ ಅವರಿಗೆ ಶುಭಾಶಯಗಳು ಹರಿದು ಬಂದಿದ್ದವು. ಇದೇ ವೇಳೆ ಕೇವಲ ಸುದೀಪ್ ಅವರಿಗೆ ವಿಶ್ ಮಾಡಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿಯ ಮೇಲೆ ಶಿವರಾಜ್ ಕುಮಾರ್ ಅವರ  ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದರು.


ಈ ಎಲ್ಲ ನೆಗೆಟಿವ್ ಕಮೆಂಟ್​ಗಳು ಸುದೀಪ್ ಅವರಿಗೆ ಬೇಸರ ಮೂಡಿಸಿದ ಕಾರಣ  ಈ ಕುರಿತು ತಮ್ಮ ಟ್ವಿಟರ್​ನಲ್ಲಿ ಅವರು, ‘ರಿಷಬ್ ಶೆಟ್ಟಿಯನ್ನು ತೆಗಳಿರುವುದು ನೋವುಂಟು ಮಾಡಿದೆ. ಶಿವಣ್ಣ ನಮ್ಮೆಲ್ಲರ ಹಿರಿಯ. ಅವರನ್ನು ಯಾವಾಗಲೂ ಪ್ರೀತಿ-ಗೌರವದಿಂದ ಕಾಣುತ್ತೇವೆ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಕಾಜಲ್ ಅಗರ್​​ವಾಲ್ ಹೊಲದ ಮಧ್ಯದಲ್ಲಿ ನಿಂತಿದ್ದು ಯಾಕೆ ಗೊತ್ತಾ?