Select Your Language

Notifications

webdunia
webdunia
webdunia
webdunia

ಚೆನ್ನೈ ಪ್ರವಾಹದಲ್ಲಿ ಸಿಲುಕಿದ್ದ ನಟ ಅಮೀರ್ ಖಾನ್ ರಕ್ಷಣೆ

ಚೆನ್ನೈ ಪ್ರವಾಹದಲ್ಲಿ ಸಿಲುಕಿದ್ದ ನಟ ಅಮೀರ್ ಖಾನ್ ರಕ್ಷಣೆ
ಚೆನ್ನೈ , ಬುಧವಾರ, 6 ಡಿಸೆಂಬರ್ 2023 (10:13 IST)
Photo Courtesy: Twitter
ಚೆನ್ನೈ: ಮೈಚಾಂಗ್ ಚಂಡಮಾರುತದಿಂದಾಗಿ ಸುರಿದ ಭಾರೀ ಮಳೆಗೆ ಚೆನ್ನೈನಲ್ಲಿ ಪ್ರವಾಹ ಸದೃಶ ವಾತಾವರಣವಿದೆ. ಹಲವಾರು ಮನೆಗಳಿಗೆ ನೀರು ನುಗ್ಗಿ ಜಲಪ್ರಳಯದಂತಾಗಿದೆ.

ಈ ನಡುವೆ ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಕೂಡಾ ಚೆನ್ನೈಗೆ ಬಂದವರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಅವರು ನಟ ವಿಷ್ಣು ವಿಶಾಲ್ ಮನೆಗೆ ಭೇಟಿ ನೀಡಿದ್ದರು.

ಆದರೆ ಭಾರೀ ಮಳೆಯಿಂದಾಗಿ ವಿಷ್ಣು ವಿಶಾಲ್ ಮನೆಯ ಸುತ್ತಲೂ ನೀರು ತುಂಬಿಕೊಂಡು ಹೊರಗೆ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜೊತೆಗೆ ಫೋನ್, ವಿದ್ಯುತ್, ವೈಫೈ ಕನೆಕ್ಷನ್ ಕೂಡಾ ಕೈಕೊಟ್ಟಿತ್ತು. ಕೇವ ಟೆರೇಸ್ ನಲ್ಲಿ ಒಂದು ಕಡೆ ನಿಂತರೆ ಮಾತ್ರ ಕೊಂಚ ಸಿಗ್ನಲ್ ಬರುತ್ತಿತ್ತು. ಎಂದು ವಿಷ್ಣು ಹೇಳಿಕೊಂಡಿದ್ದರು.

ಹೀಗಾಗಿ ಸಹಾಯಕ್ಕಾಗಿ ವಿಷ್ಣು ಕರೆ ಮಾಡಲು ಸಾಧ್ಯವಾಯಿತು. ಇದೀಗ ರಕ್ಷಣಾ ಸಿಬ್ಬಂದಿ ವಿಷ್ಣು ವಿಶಾಲ್ ಮತ್ತು ಅವರ ಮನೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಅಮೀರ್ ಖಾನ್ ರನ್ನು ಬೋಟ್ ಮೂಲಕ ರಕ್ಷಿಸಿ ಹೊರತಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನೈ ಪ್ರವಾಹ ಪೀಡಿತರ ನೆರವಿಗೆ ನಟ ಸೂರ್ಯ ಖರ್ಚು ಮಾಡಿದ್ದೆಷ್ಟು ಗೊತ್ತಾ?