Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ಜಯಶ್ರೀನಿವಾಸನ್ ರಿಯಾಜ್ ಮೇಲೆ ಉರಿದು ಬಿದ್ದಿದ್ದು ಯಾಕೆ?

ಬಿಗ್ ಬಾಸ್ ಕನ್ನಡ: ಜಯಶ್ರೀನಿವಾಸನ್ ರಿಯಾಜ್ ಮೇಲೆ ಉರಿದು ಬಿದ್ದಿದ್ದು ಯಾಕೆ?
ಬೆಂಗಳೂರು , ಬುಧವಾರ, 13 ಡಿಸೆಂಬರ್ 2017 (10:14 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಪುಟಾಣಿ ಪಾಪು ಎಂಟ್ರಿಯಾಗಿದ್ದೇ ತಡ, ಎಲ್ಲರೂ ಮಕ್ಕಳ ಪಾಲಕರಾಗಿ, ಕೂಲ್ ಆಗಿರುತ್ತಾರೆ ಎಂಬ ಲೆಕ್ಕಾಚಾರ ತಪ್ಪಾಗಿದೆ.
 

ಟಾಸ್ಕ್ ನಡೆಯುವಾಗ ಜಗಳ ಮಾಡುವುದು ಬಿಟ್ಟು ಎಂಜಾಯ್ ಮಾಡಿ ಎಂದು ಯಾರು ಎಷ್ಟೇ ಬುದ್ದಿ ಹೇಳಿದರೂ ಸ್ಪರ್ಧಿಗಳು ಮಾತ್ರ ತಮ್ಮ ಚಾಳಿ ಬಿಡುತ್ತಿಲ್ಲ. ಇಂದೂ ಹಾಗೇ ಆಗಿದೆ.

ರಿಯಾಜ್ ಮತ್ತು ಜಯಶ್ರೀನಿವಾಸನ್ ಬಿಗ್ ಬಾಸ್ ಆದೇಶದ ಪ್ರಕಾರ ಪರಸ್ಪರ ಕೋಳ ಹಾಕಿಕೊಂಡು ಜೋಡಿಯಾಗಿದ್ದಾರೆ. ನಿನ್ನೆಯವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಮಗುವನ್ನು ನೋಡಿಕೊಳ್ಳುವ ವಿಚಾರಕ್ಕೆ ರಿಯಾಜ್, ಜಯಶ್ರೀನಿವಾಸನ್ ಗೆ ಹಾಲು ಕುಡಿಸಿ ಗೊತ್ತಿಲ್ಲ ಎಂದಿದ್ದು, ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.

ನಿನಗಿಂತ ಹೆಚ್ಚು ನಾಲ್ಕು ಮಕ್ಕಳನ್ನು ಹೊತ್ತು, ಹಾಲು ಕುಡಿಸಿ ಬೆಳೆಸಿಯೇ ನಾವಿಲ್ಲಿರೋದು ಎಂದು ರಿಯಾಜ್ ಗೆ ಸ್ಟ್ರಾಂಗ್ ಆಗಿ ಮೆಸೇಜ್ ಕೊಟ್ಟಿದ್ದಾರೆ ಜಯಶ್ರೀನಿವಾಸನ್. ಇವರ ಜಗಳಕ್ಕೆ ನಿವೇದಿತಾ ಮತ್ತು ಚಂದನ್ ಜೋಡಿ ಮೂಕ ಸಾಕ್ಷಿಯಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶದಲ್ಲಿ ಯಶ್-ರಾಧಿಕಾ ರೊಮ್ಯಾಂಟಿಕ್, ಬೋಲ್ಡ್ ಅವತಾರ!