Select Your Language

Notifications

webdunia
webdunia
webdunia
webdunia

ಬೆಂಗಳೂರು ಕಂಬಳ: ಇಂದು, ನಾಳೆ ಬರಲಿರುವ ಸ್ಟಾರ್ ನಟ-ನಟಿಯರು

ಬೆಂಗಳೂರು ಕಂಬಳ: ಇಂದು, ನಾಳೆ ಬರಲಿರುವ ಸ್ಟಾರ್ ನಟ-ನಟಿಯರು
ಬೆಂಗಳೂರು , ಶನಿವಾರ, 25 ನವೆಂಬರ್ 2023 (09:00 IST)
Photo Courtesy: Twitter
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳ ಆಯೋಜಿಸಲಾಗಿದೆ. ಇದಕ್ಕೆ ಸಿನಿ ಕಲಾವಿದರ ದಂಡೇ ಹರಿದುಬರುವ ನಿರೀಕ್ಷೆಯಿದೆ.

ಅರಮನೆ ಮೈದಾನದಲ್ಲಿ ಕಂಬಳ ನಡೆಯಲಿದ್ದು, ಇದಕ್ಕಾಗಿ ಮೊನ್ನೆಯೇ ಕಂಬಳದ ಕೋಣಗಳು ಬಂದಿಳಿದಿವೆ. ಇಂದು ಮತ್ತು ನಾಳೆ ಕಂಬಳ ಉತ್ಸವ ನಡೆಯಲಿದ್ದು, ಲಕ್ಷಾಂತರ ಮಂದಿ ಭಾಗಿಯಾಗುವ ನಿರೀಕ್ಷೆಯಿದೆ. ಕಂಬಳದ ಜೊತೆಗೆ ಕರಾವಳಿ ಸಂಸ್ಕೃತಿ, ಆಹಾರದ ಅನಾವರಣವೂ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಬಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ಸೇರಿದಂತೆ ವಿವಿಧ ಭಾಷೆಯ ಸಿನಿ ಕಲಾವಿದರಿಗೆ ಆಹ್ವಾನ ನೀಡಲಾಗಿದೆ. ಹೀಗಾಗಿ ಕಂಬಳ ಉತ್ಸವಕ್ಕೆ ತಾರಾ ಮೆರುಗು ಬರಲಿದೆ.

ಬಾಲಿವುಡ್ ತಾರೆಯರಾದ ವಿವೇಕ್ ಓಬೇರಾಯ್, ಸುನಿಲ್ ಶೆಟ್ಟಿ, ಶಿಲ್ಪಾ ಶೆಟ್ಟಿ ಆಗಮಿಸುವ ನಿರಿಕ್ಷೆಯಿದೆ. ಇನ್ನು ಸ್ಯಾಂಡಲ್ ವುಡ್ ಕಲಾವಿದರಾದ ಉಪೇಂದ್ರ, ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್, ದರ್ಶನ್, ರಮೇಶ್ ಅರವಿಂದ್, ರಾಜ್ ಬಿ ಶೆಟ್ಟಿ, ಮೇಘಾ ಶೆಟ್ಟಿ ಭಾಗಿಯಾಗಲಿದ್ದಾರೆ. ಇವರಲ್ಲದೆ ಕರಾವಳಿ ಮೂಲದ ಟಾಲಿವುಡ್ ತಾರೆಯರಾದ ಪೂಜಾ ಹೆಗ್ಡೆ, ಅನುಷ್ಕಾ ಶೆಟ್ಟಿಗೂ ಆಹ್ವಾನ ನೀಡಲಾಗಿದೆ. ಕ್ರಿಕೆಟಿಗ ಕೆಎಲ್ ರಾಹುಲ್ ಗೂ ಆಹ್ವಾನ ನೀಡಲಾಗಿದ್ದು, ಅವರು ಆಗಮಿಸುತ್ತಾರೋ ಎನ್ನುವುದು ಇನ್ನೂ ಖಚಿತವಾಗಿಲ್ಲ. ಒಟ್ಟಾರೆ ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಕರಾವಳಿ ಹಬ್ಬದ ಜೊತೆಗೆ ಮೆಚ್ಚಿನ ತಾರೆಯರನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಗಿಂತ ಮಕ್ಕಳ ಮಾತಿಗೆ ಬೆಲೆಕೊಡುವ ಶಾರುಕ್ ಖಾನ್