Select Your Language

Notifications

webdunia
webdunia
webdunia
webdunia

ಹಲ್ಲೆಗೆ ಯತ್ನ: ನ್ಯಾಯಕ್ಕಾಗಿ ಸಚಿವ ಪ್ರಲ್ಹಾದ್‌ ಜೋಶಿ ಭೇಟಿಯಾದ ನಟಿ ಹರ್ಷಿಕಾ, ಭುವನ್ ದಂಪತಿ

ಹಲ್ಲೆಗೆ ಯತ್ನ: ನ್ಯಾಯಕ್ಕಾಗಿ ಸಚಿವ ಪ್ರಲ್ಹಾದ್‌ ಜೋಶಿ ಭೇಟಿಯಾದ ನಟಿ ಹರ್ಷಿಕಾ, ಭುವನ್ ದಂಪತಿ

Sampriya

ಹುಬ್ಬಳ್ಳಿ , ಬುಧವಾರ, 24 ಏಪ್ರಿಲ್ 2024 (14:30 IST)
Photo Courtesy X
ಹುಬ್ಬಳ್ಳಿ: ಬೆಂಗಳೂರಿನ ಹೊಟೇಲ್‌ನಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿದಂತೆ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ದಂಪತಿ ಇಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿಯಾಗಿ ಚರ್ಚಿಸಿದರು.

ಸಚಿವರಲ್ಲಿ, 'ಬೆಂಗಳೂರಿನಲ್ಲಿ ಕನ್ನಡ ಮಾತನಾಡಿದ್ದಕ್ಕೆ ಕೆಲವು ಕಿಡಿಗೇಡಿಗಳು ಹಲ್ಲೆ ನಡೆಸಿ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಈ ಕುರಿತು ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನನಗೆ ನ್ಯಾಯ ಕೊಡಿಸಬೇಕು' ಎಂದು ಮನವಿ ಮಾಡಿದರು.

ಪೊಲೀಸರು ಪರಿಶೀಲಿಸಿದ ಸಿಸಿಟಿವಿಯಲ್ಲಿ ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದ ಮೂವರನ್ನು ಗುರುತಿಸಿದ್ದೇವೆ. ಈ ವಿಚಾರವನ್ನು ಸಚಿವರ ಬಳಿ ಹೇಳಿಕೊಂಡಿದ್ದೇವೆ ಎಂದರು.

ಮಾಧ್ಯಮದ ಜತೆ ಮಾತನಾಡಿದ ಅವರು, ನಾವು ಹೋಟೆಲ್‌ಗೆ ಹೋದ‌ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಕನ್ನಡ ಮಾತಾಡಿದ್ದಕ್ಕೆ‌ ಜಗಳ ಮಾಡಿದ್ದಾರೆ. ದೌರ್ಜನ್ಯ ಎಸಗಿ ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದರು ಎಂದು ನೋವು ತೊಡಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಡಾ.ರಾಜ್ ಕುಮಾರ್ ಬರ್ತ್ ಡೇ: ಅಣ್ಣಾವ್ರಿಗೆ ಎಷ್ಟೆಲ್ಲಾ ಬಿರುದುಗಳಿತ್ತು ಹೇಳಿ ನೋಡೋಣ