Select Your Language

Notifications

webdunia
webdunia
webdunia
webdunia

ನಂದಿನಿ ಉತ್ಪನ್ನಗಳ ರಾಯಭಾರಿ ಆದ ನಟ ಶಿವರಾಜ್ ಕುಮಾರ್

ನಂದಿನಿ ಉತ್ಪನ್ನಗಳ ರಾಯಭಾರಿ ಆದ ನಟ ಶಿವರಾಜ್ ಕುಮಾರ್
bangalore , ಮಂಗಳವಾರ, 1 ಆಗಸ್ಟ್ 2023 (17:25 IST)
ದೊಡ್ಮನೆ ಅಂತಂದ್ರೆನೇ ಹಾಗೆ ಅಣ್ಣವರ ಕಾಲದಿಂದಲೂ ಕೂಡ ಸದಾ ಸಮಾಜಮುಖಿ ಕೆಲಸಗಳನ್ನೇ ಮಾಡುತ್ತಾ ಬಂದಿದೆ. ಅನ್ನದಾತರು, ಬಡವರು, ನಾಡಿನ ಜನತೆಗಾಗಿ ಸದಾ ಹೋರಾಟವನ್ನೇ ಮಾಡಿಕೊಂಡು ನೊಂದವರ ಬೆನ್ನಿಗೆ ನಿಲ್ಲುತ್ತಾ ಬಂದವರು. ಅವರ ಹಾದಿಯಲ್ಲೆ ಅವರ ಮಕ್ಕಳಾದ ರಾಘವೇಂದ್ರ ರಾಜಕುಮಾರ್ ಆಗಬಹುದು ಪುನೀತ್ ರಾಜಕುಮಾರ್ ಹಾಗೂ ಶಿವರಾಜ್ ಕುಮಾರ್  ಯಲ್ಲರೂ ಕೂಡ ಇಂದಿಗೂ ಅದೇ ಹಾದಿಯನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಹತ್ವದ ನಿರ್ಧಾರವನ್ನು ಮಾಡಿದ್ದು, ನಂದಿನಿ ಉತ್ಪನ್ನಗಳ ರಾಯಭಾರಿ ಯಾಗಲ್ಲೂ ನಟ ಶಿವರಾಜ್ಕುಮಾರ್ ಒಪ್ಪಿಗೆ ನೀಡಿದ್ದು, ನಮ್ಮ ನಾಡಿನ ಅನ್ನದಾತರ ಬೆನ್ನಿಗೆ ನಿಲ್ಲಲು ಮುಂದಾಗಿದ್ದಾರೆ.

ಡಾ. ರಾಜ್ಕುಮಾರ್ ಅವರು ಕೂಡ 1996ರಲ್ಲಿ  ನಂದಿನಿ ಉತ್ಪನ್ನದ ರಾಯಭಾರಿ ಆಗಿದ್ದರು. ರೈತರಿಗೆ ಸಹಕಾರಿ ಆಗುತ್ತದೆ ಎಂಬ ಉದ್ದೇಶದಿಂದ ಅಣ್ಣವರು ಪ್ರಚಾರಕ್ಕೆ ಯಾವುದೇ ಸಂಭಾವನೆ ಪಡೆದಿರಲಿಲ್ಲ. ಅವರ ಹಾದಿಯಲ್ಲಿ ಕರ್ನಾಟಕ ರತ್ನ ಅಭಿಮಾನಿಗಳ ದೇವರು ಡಾ. ಪುನೀತ್ ರಾಜಕುಮಾರ್ ಅವರು ಕೂಡ ಸಾಗಿದ್ದರು. ಅವರು ಹಲವು ವರ್ಷಗಳ ಕಾಲ ನಮ್ಮ ಹೆಮ್ಮೆಯ ನಂದಿನಿ ಪ್ರಾಡಕ್ಟ್ಗಳ ಪ್ರಚಾರದಲ್ಲಿ ಭಾಗಿ ಆಗಿದ್ದರು. ಇದಕ್ಕಾಗಿ ಅವರು ಯಾವುದೇ ಸಂಭಾವನೆ ಪಡೆದಿರಲಿಲ್ಲ ಎಂಬ ಸುದ್ದಿ ಅವರ ಸಾವಿನ ಬಳಿಕ ಕೇಳಿ ಬಂದಿತ್ತು. ಇದೀಗ ಅಂತಹದ್ದೇ ಮತ್ತೊಂದು ಮಹತ್ವದ ಕಾರ್ಯಕ್ಕೆ ದೊಡ್ಮನೆ ಮುಂದಾಗಿದ್ದು, ಕರುನಾಡ ಅನ್ನದಾತರ ಬೆನ್ನಿಗೆ ನಿಲ್ಲಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮುಂದಾಗಿದ್ದಾರೆ. ಹೌದು ವೀಕ್ಷಕರೇ… ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹಾಗೂ ಎಂಡಿ ಜಗದೀಶ್ ಅವರು ಶಿವರಾಜ್ ಕುಮಾರ್ ಅವರಿಗೆ ನಂದಿನಿ ಉತ್ಪನ್ನಗಳ ರಾಯಭಾರಿಯಾಗುವಂತೆ ಮನವಿ ಮಾಡಿದ್ದರು ಇದೀಗ ಮನವಿಗೆ ಮನವಿಗೆ ನಟ ಶಿವರಾಜಕುಮಾರ್ ಸ್ಪಂದಿಸಿದ್ದು, ಶಿವಣ್ಣಗೆ ಅವರಿಗೆ KMFಅಧ್ಯಕ್ಷ ಭೀಮಾನಾಯ್ಕ್ ಹೂಗುಚ್ಛ ನೀಡಿ ಅಭಿನಂದಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪೈರಸಿ ವಿರುದ್ಧ ಕ್ರಮಕ್ಕೆ ಮುಂದಾದ ಕೇಂದ್ರ: ಬ್ಲಾಕ್ ಆಗಲಿವೆ ವೆಬ್ ಸೈಟ್ ಗಳು