Select Your Language

Notifications

webdunia
webdunia
webdunia
webdunia

ದೀಪಿಕಾ ಪಡುಕೋಣೆ ತಲೆಗೆ ಐದು ಕೋಟಿ ಘೋಷಣೆ: ಪದ್ಮಾವತಿ ನಟಿಗೆ ಈಗ ಏಳು ಸುತ್ತಿನ ಕೋಟೆ

ದೀಪಿಕಾ ಪಡುಕೋಣೆ ತಲೆಗೆ ಐದು ಕೋಟಿ ಘೋಷಣೆ: ಪದ್ಮಾವತಿ ನಟಿಗೆ ಈಗ ಏಳು ಸುತ್ತಿನ ಕೋಟೆ
ಮುಂಬೈ , ಶುಕ್ರವಾರ, 17 ನವೆಂಬರ್ 2017 (08:39 IST)
ಮುಂಬೈ: ಪದ್ಮಾವತಿ ಸಿನಿಮಾ ಬಿಡುಗಡೆ ವಿವಾದದ ಬಿಸಿ ಇದೀಗ ನಟಿ ದೀಪಿಕಾ ಪಡುಕೋಣೆಗೆ ತಾಕಿದೆ. ಭಾರತೀಯ ಮಹಿಳೆಯರು ಹಿಂಜರಿಕೆಯಲ್ಲಿದ್ದಾರೆ ಎಂದು ನಟಿ ವಿವಾದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಬೆನ್ನಲ್ಲೇ ಉತ್ತರ ಪ್ರದೇಶದ ಸಂಘಟನೆಯೊಂದು ಜೀವ ಬೆದರಿಕೆ ಒಡ್ಡಿದೆ.
 

ಉತ್ತರ ಪ್ರದೇಶದ ಛತ್ರಿಯ ಸಮಾಜ ಪದ್ಮಾವತಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮತ್ತು ನಟಿ ದೀಪಿಕಾ ಪಡುಕೋಣೆಯ ತಲೆ ಕತ್ತರಿಸಿ ತಂದವರಿಗೆ 5 ಕೋಟಿ ರೂ. ಬಹುಮಾನ ನೀಡುವುದಾಗಿ ಬೆದರಿಕೆ ಕರೆ ನೀಡಿದೆ.

ಈ ಹಿನ್ನಲೆಯಲ್ಲಿ ನಟಿಯ ಸುತ್ತ ಭದ್ರತೆ ಹೆಚ್ಚಿಸಲಾಗಿದೆ. ಛತ್ರಿಯ ಸಮಾಜದ ಕಾರ್ಯಕರ್ತ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಠಾಕೂರ್ ಅಭಿಷೇಕ್ ಸೋಮ್ ರುಂಡ ಕತ್ತರಿಸುವವರಿಗೆ 5 ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದ್ದು, ಅನಾಹುತವಾಗುವ ಮೊದಲು ದೇಶ ಬಿಟ್ಟು ತೆರಳುವಂತೆ ದೀಪಿಕಾಗೆ ಬೆದರಿಕೆ ಹಾಕಿದ್ದಾರೆ.

ಡಿಸೆಂಬರ್ 1 ರಂದು ಈ ಸಿನಿಮಾ ಬಿಡುಗಡೆಯಾಗಬೇಕಿದ್ದು, ಈಗಾಗಲೇ ರಜಪೂತ್ ಕರ್ಣಿ ಸೇನೆ  ಆ ದಿನ ಭಾರತ ಬಂದ್ ಗೆ ಕರೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೀಪಿಕಾ ಪಡುಕೋಣೆ ಮೂಗು ಕತ್ತರಿಸುತ್ತೇವೆ: ಕರ್ಣಿ ಸಂಘಟನೆ ಮುಖಂಡ