Select Your Language

Notifications

webdunia
webdunia
webdunia
webdunia

ಮೋದಿ ಒಬ್ಬರಿಂದ ದೇಶ ಬದಲಾವಣೆ ಸಾಧ್ಯವಿಲ್ಲ- ಉಪೇಂದ್ರ

ಮೋದಿ ಒಬ್ಬರಿಂದ ದೇಶ ಬದಲಾವಣೆ ಸಾಧ್ಯವಿಲ್ಲ- ಉಪೇಂದ್ರ
ಉಡುಪಿ , ಬುಧವಾರ, 6 ಡಿಸೆಂಬರ್ 2017 (19:55 IST)
ಪ್ರಧಾನಮಂತ್ರಿ ನರೇಂದ್ರಮೋದಿ ಒಬ್ಬರಿಂದ ದೇಶ ಬದಲಾವಣೆ ಹೊಂದಲು ಸಾಧ್ಯವಿಲ್ಲ. ಜನರೂ ಬದಲಾಗಬೇಕು ಎಂದು ನಟ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿ, ರಾಷ್ಟ್ರೀಯ ಪಕ್ಷಗಳಿಂದ ಆಹ್ವಾನ ಬಂದಿದೆ. ಆದರೆ, ಅವೆಲ್ಲವನ್ನು ಬಿಟ್ಟು ನನ್ನ ಕನಸನ್ನು ಹೊತ್ತು ಹೊರಟಿದ್ದೇನೆ ಎಂದಿದ್ದಾರೆ.

50 ಸಾವಿರ ಮೇಲ್ ಗಳು ಬಂದಿದ್ದು, 30 ಸಾವಿರ ಕ್ರಿಯಾಶೀಲ ಜನರು ಜೊತೆಯಲ್ಲಿದ್ದಾರೆ. ಶಾಸಕ ಸ್ಥಾನ ಗೆಲ್ಲಲು 50 ಕೋಟಿ ಹಣ ಬೇಕು. ಆದರೆ, ಅದು ನನ್ನಬಳಿ ಇಲ್ಲ. ಜನರ ಬೆಂಬಲ ದೊರತರೆ ಸಾಕು ಎಂದು ತಿಳಿಸಿದ್ದಾರೆ.

ಸತ್ಯ ಸಾಯೋದೇ ಇಲ್ಲ. ನನಗೆ ಶೀಘ್ರವಾಗಿ ಕೆಲಸವಾಗಬೇಕಿಲ್ಲ, ನನ್ನ ಕೆಲಸ ನಾನು ಮಾಡುತ್ತೇನೆ. ಅಣ್ಣಾ ಹಜಾರೆ ಬೆಂಬಲ ಕೇಜ್ರಿವಾಲ್‍ಗೆ ಇತ್ತು. ಅರವಿಂದ ಕೇಜ್ರೀವಾಲ್ ಇನ್ನೂ ಚೆನ್ನಾಗಿ ಕೆಲಸ ಮಾಡಬಹುದಿತ್ತು ಎಂದ ಅವರು, ದೇಶದಲ್ಲಿ ಆರೋಗ್ಯ, ಶಿಕ್ಷಣ ಸರಿಯಾಗಿ ಸಿಕ್ಕಿದ್ದರೆ ಇವತ್ತು ಭ್ರಷ್ಟಾಚಾರ ಎಂಬುವುದು ಇರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನೆಮಾ ಟಾಕೀಜ್‌ನಲ್ಲಿ ಬಾಲಕಿಯ ಮೇಲೆ ಗ್ಯಾಂಗ್‌ರೇಪ್: ಇಬ್ಬರ ಬಂಧನ