Select Your Language

Notifications

webdunia
webdunia
webdunia
webdunia

ನಿರ್ಣಾಯಕ ಪಂದ್ಯಕ್ಕೇ ಧೋನಿಗೆ ಕೊಕ್ ಕೊಡಲಿರುವ ಟೀಂ ಇಂಡಿಯಾ!

ನಿರ್ಣಾಯಕ ಪಂದ್ಯಕ್ಕೇ ಧೋನಿಗೆ ಕೊಕ್ ಕೊಡಲಿರುವ ಟೀಂ ಇಂಡಿಯಾ!
ರಾಂಚಿ , ಶನಿವಾರ, 9 ಮಾರ್ಚ್ 2019 (09:42 IST)
ರಾಂಚಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮುಂದಿನ ಪಂದ್ಯಗಳು ಸರಣಿ ನಿರ್ಣಾಯಕವಾಗಲಿದೆ. ಹಾಗಿದ್ದರೂ ಈ ಪಂದ್ಯಗಳಿಗೆ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿಗೆ ವಿಶ್ರಾಂತಿ ನೀಡಲಾಗುವುದಂತೆ!


ಹೀಗಂತ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ. ರಾಂಚಿ ಏಕದಿನ ಪಂದ್ಯದ ಸೋಲಿನ ಬಳಿಕ ಮಾತನಾಡಿರುವ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮುಂದಿನ ಎರಡು ಪಂದ್ಯಗಳಲ್ಲಿ ಧೋನಿ ಆಡಲ್ಲ. ಅವರಿಗೆ ವಿಶ್ರಾಂತಿ ನೀಡಲಾಗುತ್ತದೆ ಎಂದಿದ್ದಾರೆ.

ಈಗಾಗಲೇ ಬ್ಯಾಟಿಂಗ್ ಬರಡುತನ ಅನುಭವಿಸುತ್ತಿರುವ ಟೀಂ ಇಂಡಿಯಾಗೆ ಧೋನಿ ಅನುಪಸ್ಥಿತಿ ಖಂಡಿತಾ ಕಾಡಲಿದೆ. ಧೋನಿ ಅನುಪಸ್ಥಿತಿಯಲ್ಲಿ ದಿನೇಶ್ ಕಾರ್ತಿಕ್ ಅಥವಾ ರಿಷಬ್ ಪಂತ್ ಸ್ಥಾನ ಪಡೆಯಬಹುದು. ಹಾಗಿದ್ದರೂ ನಿರ್ಣಾಯಕ ಪಂದ್ಯಗಳಿಗೆ ಪ್ರಮುಖ ಆಟಗಾರನಿಗೆ ವಿಶ್ರಾಂತಿ ನೀಡುತ್ತಿರುವುದು ಎಷ್ಟು ಸರಿ ಎಂಬ ಚರ್ಚೆ ನಡೆದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ವಿರುದ್ಧ ಆರ್ಮಿ ಕ್ಯಾಪ್ ಹಾಕಿಕೊಂಡು ಟೀಂ ಇಂಡಿಯಾ ಆಡಲಿ!