Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಕ್ರಿಕೆಟ್: ಮುಂಬೈ ಮಣಿಸಿದ ಕರ್ನಾಟಕ ಸೆಮಿಫೈನಲ್ ಗೆ!

ರಣಜಿ ಟ್ರೋಫಿ ಕ್ರಿಕೆಟ್: ಮುಂಬೈ ಮಣಿಸಿದ ಕರ್ನಾಟಕ ಸೆಮಿಫೈನಲ್ ಗೆ!
ನಾಗ್ಪುರ , ಭಾನುವಾರ, 10 ಡಿಸೆಂಬರ್ 2017 (15:01 IST)
ನಾಗ್ಪುರ: ಮುಂಬೈ ವಿರುದ್ಧ ರಣಜಿ ಟ್ರೋಫಿ ಕ್ರಿಕೆಟ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಇನಿಂಗ್ಸ್ ಮತ್ತು 20 ರನ್ ಗಳಿಂದ ಗೆಲುವಿನ ಸಿಹಿ ಉಂಡಿದೆ.
 

ಅಂತಿಮ ದಿನವಾದ ಇಂದು ಮುಂಬೈ ಮೊದಲಾರ್ಧದಲ್ಲಿ ಜಿಗುಟಿನ ಆಟವಾಡಿ ಕರ್ನಾಟಕಕ್ಕೆ ಆತಂಕ ತಂದೊಡ್ಡಿತಾದರೂ, ದ್ವಿತಿಯಾರ್ಧದಲ್ಲಿ ಅದ್ಭುತ ಬೌಲಿಂಗ್ ಮಾಡಿದ ಕರ್ನಾಟಕ ಬೌಲರ್ ಗಳು ಎದುರಾಳಿಗಳನ್ನು 377 ರನ್ ಗಳಿಗೆ ಆಲೌಟ್ ಮಾಡಿದರು.

ಕರ್ನಾಟಕ ಪರ ಕೆ ಗೌತಮ್ 6 ವಿಕೆಟ್ ಕಬಳಿಸಿದರು. ಮೊದಲ ಇನಿಂಗ್ಸ್ ನಲ್ಲಿ ನಾಯಕ ವಿನಯ್ ಕುಮಾರ್ 6 ವಿಕೆಟ್ ಗಳಿಸಿದ್ದರು. ಇದರೊಂದಿಗೆ ಈ ಋತುವಿನ ರಣಜಿ ಪಂದ್ಯದಲ್ಲಿ ಸೆಮಿಫೈನಲ್ ಗೇರಿದ ಮೊದಲ ತಂಡವೆಂಬ ಹೆಗ್ಗಳಿಕೆ ಕರ್ನಾಟಕ ಪಾತ್ರವಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಛೀ… ಇದೆಂಥಾ ಆಟ? ಕೊಹ್ಲಿಯಿಲ್ಲದೆ ಇಷ್ಟೊಂದು ಸೊರಗಿತೇ ಟೀಂ ಇಂಡಿಯಾ?