Select Your Language

Notifications

webdunia
webdunia
webdunia
webdunia

ಐಪಿಎಲ್: ಯುವರಾಜ್ ಸಿಂಗ್ ಗೆ ಛೀಮಾರಿ ಹಾಕಿದ ಕಿಂಗ್ಸ್ ಇಲೆವೆನ್ ಪಂಜಾಬ್ ಅಭಿಮಾನಿಗಳು!

ಐಪಿಎಲ್: ಯುವರಾಜ್ ಸಿಂಗ್ ಗೆ ಛೀಮಾರಿ ಹಾಕಿದ ಕಿಂಗ್ಸ್ ಇಲೆವೆನ್ ಪಂಜಾಬ್ ಅಭಿಮಾನಿಗಳು!
ನವದೆಹಲಿ , ಸೋಮವಾರ, 9 ಏಪ್ರಿಲ್ 2018 (09:02 IST)
ನವದೆಹಲಿ: ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್ ಅವರ ಬಿರುಗಾಳಿಯಂತಹ ಇನಿಂಗ್ಸ್ ನಿಂದಾಗಿ ಗೆದ್ದಿತು.

ಆದರೆ ಪಂಜಾಬ್ ನವರೇ ಆದ ಯುವರಾಜ್ ಸಿಂಗ್ ಆಟ ನೋಡಿ ಪಂಜಾಬ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಉಗಿದು ಉಪ್ಪಿನಕಾಯಿ ಹಾಕಿದ್ದಾರೆ.

ಯುವರಾಜ್ ಬರೋಬ್ಬರಿ 22 ಬಾಲ್ ಗಳಲ್ಲಿ ಕೇವಲ 12 ರನ್ ಗಳಿಸಿ ಔಟಾಗಿದ್ದರು. ಅವರ ಈ ನಿಧಾನಗತಿಯ ಇನಿಂಗ್ಸ್ ನೋಡಿ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. ಮೊದಲು ಈ ಯುವರಾಜ್ ನನ್ನು ಹೊರಗಟ್ಟಿ, ಪ್ರತಿಭಾವಂತ ಮನೋಜ್ ತಿವಾರಿಯನ್ನು ಆಡುವ ಬಳಗಕ್ಕೆ ಸೇರಿಸಿ ಎಂದು ಅಭಿಮಾನಿಗಳು ತಾಕೀತು ಮಾಡಿದ್ದಾರೆ. ಮುಂದಿನ ಪಂದ್ಯದಲ್ಲಿ ಈ ಬದಲಾವಣೆಯಾಗುತ್ತೋ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಬೇರೆ ಬೇರೆ ತಂಡದಲ್ಲಿ ಆಡುತ್ತಿದ್ದರೂ ಬ್ರಾವೋ, ಪೊಲ್ಲಾರ್ಡ್ ಒಂದೇ ನಂ. ಜೆರ್ಸಿ ಹಾಕಿದ್ದೇಕೆ?