Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಆಟಗಾರರನ್ನು ಮನೆಗೆ ಕರೆಸಿ ಭರ್ಜರಿ ಔತಣ ನೀಡಿದ ಧೋನಿ

ಟೀಂ ಇಂಡಿಯಾ ಆಟಗಾರರನ್ನು ಮನೆಗೆ ಕರೆಸಿ ಭರ್ಜರಿ ಔತಣ ನೀಡಿದ ಧೋನಿ
ರಾಂಚಿ , ಗುರುವಾರ, 7 ಮಾರ್ಚ್ 2019 (10:41 IST)
ರಾಂಚಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಪಾಲ್ಗೊಳ್ಳಲು ತಮ್ಮ ತವರು ರಾಂಚಿಗೆ ಬಂದಿಳಿದಿರುವ ಟೀಂ ಇಂಡಿಯಾ ಆಟಗಾರರಿಗೆ ಕ್ರಿಕೆಟಿಗ ಧೋನಿ ಭರ್ಜರಿ ಆತಿಥ್ಯ ನೀಡಿದ್ದಾರೆ.


ರಾಂಚಿಯ ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಾಳೆ ಮೂರನೇ ಏಕದಿನ ಪಂದ್ಯ ನಡೆಯಲಿದೆ. ಈ ಏಕದಿನ ಪಂದ್ಯಕ್ಕೂ ಮೊದಲು ಟೀಂ ಇಂಡಿಯಾ ಆಟಗಾರರನ್ನು ತಮ್ಮ ಮನೆಗೆ ಆಹ್ವಾನಿಸಿದ ಧೋನಿ ಆಟಗಾರರಿಗೆ ಔತಣ ಕೂಟ ನೀಡಿದ್ದಾರೆ.

ಪತ್ನಿ ಸಾಕ್ಷಿ ಸಿಂಗ್ ಜತೆಗೆ ಖುದ್ದಾಗಿ ತಾವೇ ಎಲ್ಲಾ ಆಟಗಾರರನ್ನು ಸ್ವಾಗತಿಸಿ ಭರ್ಜರಿ ಭೋಜನವನ್ನೇ ನೀಡಿದ್ದಾರೆ. ಧೋನಿಯ ಔತಣಕೂಟಕ್ಕೆ ನಾಯಕ ಕೊಹ್ಲಿ, ಕೋಚ್ ರವಿಶಾಸ್ತ್ರಿ, ಸೇರಿದಂತೆ ಟೀಂ ಇಂಡಿಯಾದ ಎಲ್ಲಾ ಆಟಗಾರರು, ಸಿಬ್ಬಂದಿ ಆಗಮಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತನ್ನದೇ ಹೆಸರಿನ ಪೆವಿಲಿಯನ್ ಉದ್ಘಾಟಿಸಲು ಧೋನಿ ನಿರಾಕರಿಸಿದ್ದೇಕೆ ಗೊತ್ತಾ?!