Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಗೆದ್ದರೂ ಧೋನಿ ಅಭಿಮಾನಿಗಳಿಗೆ ನಿರಾಸೆ

ಟೀಂ ಇಂಡಿಯಾ ಗೆದ್ದರೂ ಧೋನಿ ಅಭಿಮಾನಿಗಳಿಗೆ ನಿರಾಸೆ
ರಾಂಚಿ , ಭಾನುವಾರ, 8 ಅಕ್ಟೋಬರ್ 2017 (08:20 IST)
ರಾಂಚಿ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯವನ್ನು ಮಳೆ ಬಂದರೂ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತ 9 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಆದರೆ ಧೋನಿ ಅಭಿಮಾನಿಗಳು ಮಾತ್ರ ನಿರಾಶರಾಗಿದ್ದಾರೆ.

 
ಅದಕ್ಕೆ ಕಾರಣ ಮಳೆ.  ಆಸ್ಟ್ರೇಲಿಯಾ 18 ಓವರ್ ಗಳಲ್ಲಿ 118 ರನ್ ಗಳಿಸಿ ಬ್ಯಾಟಿಂಗ್ ಮಾಡಿದಾಗ ಮಳೆ ಸುರಿಯಿತು. ಮತ್ತೆ ಪಂದ್ಯ ಆರಂಭವಾದಾಗ ಟೀಂ ಇಂಡಿಯಾಗೆ  6 ಓವರ್ ಗಳಲ್ಲಿ 48 ರನ್ ಗಳ ಗೆಲುವಿನ ಗುರಿ ನೀಡಲಾಯಿತು.

ಆರಂಭಿಕರಾಗಿ ಬಂದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಉತ್ತಮ ಆರಂಭ ಒದಗಿಸಿದರು. ರೋಹಿತ್ ಔಟಾದ ಬಳಿಕ ನಾಯಕ ಕೊಹ್ಲಿ ಕ್ರೀಸ್ ಗೆ ಬಂದು 22 ರನ್ ಗಳಿಸಿ ಬೌಂಡರಿಯೊಂದಿಗೆ ಗೆಲುವಿನ ದಡ ಮುಟ್ಟಿಸಿದರು. ಹೀಗಾಗಿ ಧೋನಿ ಬ್ಯಾಟಿಂಗ್ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕಡೆಗಣಿಸಿದ್ದಕ್ಕೆ ಅಜಿಂಕ್ಯಾ ರೆಹಾನೆಗೆ ಒಳ್ಳೆದೇ ಆಯ್ತು!