Select Your Language

Notifications

webdunia
webdunia
webdunia
webdunia

ಟ್ರಾಫಿಕ್ ಸಮಸ್ಯೆಯಿಂದಾಗಿ ರಿಕ್ಷಾ ಹಿಡಿದು ಪಂದ್ಯಕ್ಕೆ ಹಾಜರಾದ ಕ್ರಿಕೆಟಿಗರು!

ಟ್ರಾಫಿಕ್ ಸಮಸ್ಯೆಯಿಂದಾಗಿ ರಿಕ್ಷಾ ಹಿಡಿದು ಪಂದ್ಯಕ್ಕೆ ಹಾಜರಾದ ಕ್ರಿಕೆಟಿಗರು!
ಢಾಕಾ , ಗುರುವಾರ, 22 ಮಾರ್ಚ್ 2018 (09:22 IST)
ಢಾಕಾ: ಟ್ರಾಫಿಕ್ ಜ್ಯಾಮ್ ಸಮಸ್ಯೆ ನಮ್ಮ ಭಾರತ ದೇಶದಲ್ಲಿ ಮಾತ್ರವಲ್ಲ. ನೆರೆಯ ಬಾಂಗ್ಲಾದೇಶದಲ್ಲೂ ತಲೆಬಿಸಿ ಮಾಡುತ್ತಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.

ಢಾಕಾದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಟ್ರಾ ಫಿಕ್ ಸಮಸ್ಯೆಯಿಂದಾಗಿ ಆಟಗಾರರು ನಿಗದಿತ ಸಮಯಕ್ಕೆ ಪಂದ್ಯ ನಡೆಯುವ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಕೊನೆಗೆ ಪಂದ್ಯ 30 ನಿಮಿಷ ತಡವಾಗಿ ಆರಂಭವಾಯಿತು. ಮೈದಾನಕ್ಕೆ ತಲುಪಲು ಆಟಗಾರರು ರಿಕ್ಷಾ ಬಳಸಬೇಕಾಯಿತು.

ಇದು ನಡೆದಿರುವುದು ಢಾಕಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ. ವಿಶೇಷವೆಂದರೆ ಭಾರತದಲ್ಲೂ ಒಮ್ಮೆ ಹೀಗೇ ಆಗಿತ್ತು. ಕರ್ನಾಟಕ ಮತ್ತು ವಿದರ್ಭ ನಡುವಿನ ರಣಜಿ ಟ್ರೋಫಿ ಕೋಲ್ಕೊತ್ತಾ ಮೈದಾನದಲ್ಲಿ ಆಯೋಜಿಸಲಾಗಿತ್ತು. ವಿದರ್ಭ ಆಟಗಾರರು ಟ್ರಾಫಿಕ್ ನಲ್ಲಿ ಸಿಲುಕಿಕೊಂಡು ತಡವಾಗಿ ಬಂದಿದ್ದರಿಂದ ಪಂದ್ಯ ಅರ್ಧಗಂಟೆ ತಡವಾಗಿ ಆರಂಭವಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

Share this Story:

Follow Webdunia kannada

ಮುಂದಿನ ಸುದ್ದಿ

ನನಗೆ ಯಾರ ಅನುಕಂಪವೂ ಬೇಕಾಗಿಲ್ಲ ಎಂದ ಟೀಂ ಇಂಡಿಯಾ ಕ್ರಿಕೆಟಿಗ