Select Your Language

Notifications

webdunia
webdunia
webdunia
webdunia

ಕೃಷ್ಣಮೃಗ ಭೇಟೆ ಪ್ರಕರಣ: ಸಲ್ಮಾನ್ ಖಾನ್ ಇಂದು ನ್ಯಾಯಾಲಯಕ್ಕೆ

ಕೃಷ್ಣಮೃಗ ಭೇಟೆ ಪ್ರಕರಣ: ಸಲ್ಮಾನ್ ಖಾನ್ ಇಂದು ನ್ಯಾಯಾಲಯಕ್ಕೆ
Mumbai , ಗುರುವಾರ, 6 ಜುಲೈ 2017 (11:09 IST)
ಮುಂಬೈ: ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಜೋಧ್ ಪುರ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರಾಗಲಿದ್ದಾರೆ.


ಈ ಮೊದಲು ಸಲ್ಮಾನ್ ಗೆ 20000 ವೈಯಕ್ತಿಕ ಬಾಂಡ್ ನೀಡಿದ ಹಿನ್ನಲೆಯಲ್ಲಿ ಜಾಮೀನು ಮಂಜೂರು ಮಾಡಲಾಗಿತ್ತು. ನ್ಯಾಯಾಧೀಶರು ನಿವೃತ್ತರಾದ ಹಿನ್ನಲೆಯಲ್ಲಿ ಹೊಸ ನ್ಯಾಯಾಧೀಶರ ಎದುರು ದಾಖಲೆ ಪತ್ರಗಳನ್ನು ಒದಗಿಸಲು ಸಲ್ಮಾನ್ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ವಕೀಲ ಮಹಿಪಾಲ್ ಸಿಂಗ್ ಹೇಳಿದ್ದಾರೆ.

ಇದೀಗ ಡಾ. ಸೂರ್ಯಪ್ರಕಾಶ್ ನೇತೃತ್ವದ ನ್ಯಾಯಪೀಠದೆದುರು ಸಲ್ಮಾನ್ ಹೊಸದಾಗಿ ದಾಖಲೆ ಒದಗಿಸಲಿದ್ದಾರೆ. ಕಳೆದ ತಿಂಗಳು ವಿಚಾರಣೆಯನ್ನು ಜುಲೈ 16 ರವರೆಗೆ ಮುಂದೂಡಲಾಗಿತ್ತು. ಈ ನಡುವೆ ಕೃಷ್ಣ ಮೃಗದ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಗೆ ಸಮನ್ಸ್ ನೀಡಬೇಕೆಂಬ ಪ್ರಾಸಿಕ್ಯೂಷನ್ ವಕೀಲರ ಬೇಡಿಕೆಯನ್ನು ಜೋಧ್ ಪುರ ನ್ಯಾಯಾಲಯ ತಳ್ಳಿ ಹಾಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರು ಕೆಟ್ಟವರಾಗಿದ್ದರೆ ಹಾಸಿಗೆ ಹಂಚಿಕೊಳ್ಳಬಹುದಂತೆ!