ಪರಪುರುಷನ ಜತೆ ರೆಸ್ಟೋರೆಂಟ್ನಲ್ಲಿ ಕಾಣಿಸಿಕೊಂಡಿದ್ದ ಕರಿಷ್ಮಾ ಅವರನ್ನು ನೋಡಿ ಸಂಜಯ್ ಕಪೂರ್ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರಿಷ್ಮಾ ಮಾಜಿ ಪತಿ ಸಂಜಯ್ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ..
ನಡೆದ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಸುದ್ದಿ ಹಬ್ಬಿರುವ ಹಿಂದೆ ಯಾರದ್ದೋ ಕೈವಾಡ ವಿದೆ ಎಂದು ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ. ಇದೊಂದು ಶುದ್ಧ ಸುಳ್ಳು ಎಂದು ಹೇಳಿದ್ದಾರೆ. ನಾವಿಬ್ಬರು ಜವಾಬ್ದಾರಿಗಳನ್ನು ಅರಿತಿದ್ದೇವೆ. ಆದ ಕಾರಣ ಕರಿಷ್ಮಾ ನನ್ನ ಉತ್ತಮ ಸ್ನೇಹಿತೆ ಎಂದಿರುವ ಅವರು, ನಾವಿಬ್ಬರು ಒಬ್ಬರನೊಬ್ಬರು ಚೆನ್ನಾಗಿರುವಂತೆ ಬಯಸುತ್ತೇವೆ ಎಂದು ತಿಳಿಸಿದರು.
ನನಗೆ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ತಮಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.. ಈ ಹಿನ್ನೆಲೆಯಲ್ಲಿ ಕರಿಷ್ಮಾ ತನ್ನ ಬಾಯ್ಫ್ರೆಂಡ್ ಜತೆಗಿದ್ದ ವೇಳೆ ಸಂಜಯ್ ಸಿಟ್ಟಾಗಿದ್ದರು ಎಂಬ ವದಂತಿಗೆ ಕಡೆಗೂ ತೆರೆ ಎಳೆದಿದ್ದಾರೆ.
ಮೊನ್ನೆ ಕರಿಷ್ಮಾ ಕಪೂರ್- ಸಂಜಯ್ ಕಪೂರ್ ಡೈವೋರ್ಸ್ ಬಳಿಕ ಕರಿಷ್ಮಾ ಹೊಸ ಬಾಯ್ಫ್ರೆಂಡ್ ಜತೆಗೆ ಕೇಳಿ ಬಂದಿತ್ತು. ಕರಿಷ್ಮಾ ಕಪೂರ್ ಸಂದೀಪ್ ತೋಶ್ನಿವಾಲಾ ಜತೆಗೆ ಸುತ್ತಾಟ ನಡೆಸುತ್ತಿದ್ದರು. ಕರಿಷ್ಮಾ ಕಪೂರ್ ತಮ್ಮ ಹೊಸ ಬಾಯ್ ಫ್ರೆಂಡ್ ಜತೆಗೆ ಡೇಟಿಂಗ್ ನಡೆಸುತ್ತಿದ್ದಾರೆ.
ಮೊನ್ನೆ ಕೂಡ ಕರಿಷ್ಮಾ ಕಪೂರ್ ತಮ್ಮ ಹೊಸ ಬಾಯ್ಫ್ರೆಂಡ್ ಜತೆಗೆ ಲಂಡನ್ ರೆಸ್ಟೋರೆಂಟ್ಗೆ ಬಂದಿದ್ರು. ಇದೇ ರೆಸ್ಟೋರೆಂಟ್ಗೆ ಸಂಜಯ್ ಕಪೂರ್ ಕೂಡ ತಮ್ಮ ಫ್ರೆಂಡ್ಸ್ ಜತೆಗೆ ಬಂದಿದ್ದರು. ಈ ವೇಳೆ ಮತ್ತೊಬ್ಬ ಪುರುಷನ ಜತೆ ಕಾಣಿಸಿಕೊಂಡ ಕರಿಷ್ಮಾ ಕಪೂರ್ ಅವರ ಮೇಲೆ ಮಾಜಿ ಪತಿ ಸಂಜಯ್ ಸಿಟ್ಟಾಗಿದ್ದಾರೆ ಎಂದು ಹೇಳಲಾಗುತ್ತಿತ್ತು.
ಈ ವೇಳೆ ಕರಿಷ್ಮಾ ಕಪೂರ್ ನೋಡಿದ ತಕ್ಷಣ ಸಂಜಯ್ ಕಿರುಚಲು ಆರಂಭಿಸಿದರು. ಅಲ್ಲಿ ದೊಡ್ಡದಂದು ಸೀನ್ನ್ನು ಸಂಜಯ್ ಕ್ರೀಯೆಟ್ ಮಾಡಿದ್ರು, ಅವರ ಕಿರುಚಾಟಕ್ಕೆ ಮಧ್ಯ ಪ್ರವೇಶಿಸಿದ ಆತನ ಸ್ನೇಹಿತರು ಸಂಜಯ್ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದ್ದರು. ಆ ಬಳಿಕ ಸ್ನೇಹಿತರು ಒತ್ತಾಯದ ಮೇರೆಗೆ ಸಂಜಯ್ ಸಮಾಧಾನಗೊಂಡಿರುವುದು ತಿಳಿದು ಬಂದಿತ್ತು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ