Select Your Language

Notifications

webdunia
webdunia
webdunia
webdunia

ಇರ್ಫಾನ್ ಖಾನ್ ನೊಂದ ಮನಸ್ಸಿನಿಂದ ಬರೆದ ಪತ್ರ ಓದಿದರೆ ಕಣ್ಣೀರು ಬರುವುದಂತು ಗ್ಯಾರಂಟಿ

ಇರ್ಫಾನ್ ಖಾನ್ ನೊಂದ ಮನಸ್ಸಿನಿಂದ ಬರೆದ ಪತ್ರ ಓದಿದರೆ ಕಣ್ಣೀರು ಬರುವುದಂತು ಗ್ಯಾರಂಟಿ
ಮುಂಬೈ , ಗುರುವಾರ, 21 ಜೂನ್ 2018 (14:09 IST)
ಮುಂಬೈ : ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಅವರು ನೊಂದ ಮನಸ್ಸಿನಿಂದ ತಮ್ಮ ಅಭಿಮಾನಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆ.


ನಟ ಇರ್ಫಾನ್ ಖಾನ್  ಅವರು ನ್ಯೂರೋಎಂಡೋಕ್ರೈನ್ ಟ್ಯೂಮರ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಈಗ  ಲಂಡನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ ಇದೀಗ ಅವರು ಕಣ್ಣೀರು ತರಿಸುವಂತಹ ಪತ್ರವೊಂದನ್ನು ಬರೆದಿದ್ದಾರೆ.
'ಕೆಲವು ಸಮಯದ ಹಿಂದೆಯಷ್ಟೇ ನನಗೆ ನ್ಯೂರೋ ಎಂಡೋಕ್ರೈನ್ ಕ್ಯಾನ್ಸರ್‌ ಇರುವುದು ತಿಳಿದು ಬಂತು, ನನಗೆ ಬಂದಿರುವುದು ಬಲು ಅಪರೂಪದ ಕಾಯಿಲೆ ಅಂತ ನನಗೆ ಗೊತ್ತು, ಇದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ, ಚಿಕಿತ್ಸೆ ಕುರಿತು ಏನೂ ಹೇಳಲು ಸಾಧ್ಯವಿಲ್ಲ. ನನ್ನ ಪ್ರಪಂಚ ನೋವಿನಿಂದ ತುಂಬಿದೆ. ನೋವೇ ದೇವರಿಗಿಂತ ದೊಡ್ಡದಾಗಿ ಕಾಣುತ್ತಿದೆ. ಪ್ರತಿಯೊಂದು ಗಿಡ, ಕೊಂಬೆ, ಎಲೆ, ಹೂ, ಪಕ್ಷಿ ಎಲ್ಲವೂ ನನ್ನಲ್ಲಿ ಅಚ್ಚರಿ, ಸಂತೋಷ, ಕುತೂಹಲ ಮೂಡಿಸುತ್ತಿದೆ. ಈಗ ನನಗೆ ಅರ್ಥವಾಗಿದೆ ಯಾವುದೇ ಅಲೆಗಳನ್ನು ನಿಯಂತ್ರಿಸಬೇಕಾಗಿಲ್ಲ, ಪ್ರಕೃತಿಯೊಂದಿಗೆ ಹೊಂದಿಕೊಂಡರಷ್ಟೇ ಸಾಕು'ಎಂದು ತಮ್ಮ ಮನದಾಳದ ನೋವನ್ನು ಅವರು ಹಂಚಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ದೇವಸ್ಥಾನಕ್ಕೆ ವಿಶೇಷವಾದ ಉಡುಗೊರೆ ನೀಡಿದ ನಟ ದರ್ಶನ್