Select Your Language

Notifications

webdunia
webdunia
webdunia
webdunia

ಕನ್ನಡಿಗರನ್ನು ರಂಜಿಸಲು ಮತ್ತೆ ಸ್ಯಾಂಡಲ್ ವುಡ್ ಗೆ ಬಂದ ನಟಿ ಮುವೈತ್ ಖಾನ್

ಕನ್ನಡಿಗರನ್ನು ರಂಜಿಸಲು ಮತ್ತೆ ಸ್ಯಾಂಡಲ್ ವುಡ್ ಗೆ ಬಂದ ನಟಿ ಮುವೈತ್ ಖಾನ್
ಬೆಂಗಳೂರು , ಮಂಗಳವಾರ, 18 ಸೆಪ್ಟಂಬರ್ 2018 (09:05 IST)
ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ 'ರಾಜಧಾನಿ','ಒರಟ-ಐ ಲವ್ ಯೂ' ಸೇರಿದಂತೆ ಹಲವಾರು ಚಿತ್ರಗಳ ವಿಶೇಷ ಹಾಡಿನಲ್ಲಿ ನರ್ತಿಸಿದ ನಟಿ ಮುವೈತ್ ಖಾನ್ ಹಲವಾರು ವರ್ಷಗಳ ನಂತರ ಮತ್ತೆಸ್ಯಾಂಡಲ್ ವುಡ್ ಗೆ ಮರಳಿದ್ದಾರೆ.


ತಮ್ಮ ಮಾದಕ ನೃತ್ಯಗಳಿಂದಲೇ ಪ್ರಸಿದ್ಢರಾಗಿರುವ ಮುಮೈತ್ ಖಾನ್, ಪಾಕಿಸ್ತಾನದಿಂದ ವಲಸೆ ಬಂದ ಕುಟುಂಬದಲ್ಲಿ ಜನಿಸಿದರು.ಇವರು ಈಗಾಗಲೇ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿಯಾಗಿದ್ದಾರೆ. ಸಂಜಯ್ ದತ್ ಅಭಿನಯದ `ಮುನ್ನಾಭಾಯಿ ಎಂ.ಬಿ.ಬಿ.ಎಸ್' ಚಿತ್ರದಲ್ಲಿನ ವಿಶೇಷ ನೃತ್ಯದಿಂದ ಬೆಳಕಿಗೆ ಬಂದ ಇವರು ತೆಲುಗು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದರು. ಇವರು ತೆಲುಗು ಬಿಗ್ ಬಾಸ್ ನ ಮೊದಲ ಸೀಜನ್ ಸ್ಪರ್ಧಿಯಾಗಿದ್ದರು.


ಈಗಾಗಲೇ ದಂಡುಪಾಳ್ಯ ಹೆಸರಿನ ಸರಣಿಗಳು ಮೂರು ಭಾಗಗಳಲ್ಲಿ ಬಂದಿವೆ. ಇದೀಗ ಮುವೈತ್ ಖಾನ್ ಅವರು  ಕೆ. ಟಿ ನಾಯಕ್ ನಿರ್ದೇಶನದ 'ದಂಡುಪಾಳ್ಯ -4' ಚಿತ್ರದ ವಿಶೇಷ ಹಾಡಿನಲ್ಲಿ ನರ್ತಿಸುತ್ತಿದ್ದಾರೆ. ಸುಮನ್ ರಂಗನಾಥ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರವು ನಾಲ್ಕು ಭಾಷೆಗಳಲ್ಲಿ ಮೂಡಿ ಬರಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನ ಸ್ಟಾರ್ ನಟನ ಜೊತೆ ತೆರೆ ಹಂಚಿಕೊಳ್ಳಲಿರುವ ಕಿಚ್ಚ ಸುದೀಪ್