Select Your Language

Notifications

webdunia
webdunia
webdunia
webdunia

ಶ್ರೀರೆಡ್ಡಿಯ ವಿರುದ್ಧ ಪವನ್ ಕಲ್ಯಾಣ ಅಭಿಮಾನಿ ದೂರು ದಾಖಲಿಸಿದ್ಯಾಕೆ?

ಶ್ರೀರೆಡ್ಡಿಯ ವಿರುದ್ಧ ಪವನ್ ಕಲ್ಯಾಣ ಅಭಿಮಾನಿ ದೂರು ದಾಖಲಿಸಿದ್ಯಾಕೆ?
ಹೈದರಾಬಾದ್ , ಗುರುವಾರ, 19 ಏಪ್ರಿಲ್ 2018 (14:54 IST)
ಹೈದರಾಬಾದ್ : ಇತ್ತಿಚೆಗೆ ಕಾಸ್ಟಿಂಗ್ ಕೌಚ್ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ಮಾಡಿದ ನಟಿ ಶ್ರೀರೆಡ್ಡಿ ಅವರು ನಟ ಪವನ್ ಕಲ್ಯಾಣ್‌ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದಕ್ಕೆ ಇದೀಗ ಅವರ  ಮೇಲೆ ಪ್ರಕರಣ ದಾಖಲಾಗಿದೆ.


 ಕಾಸ್ಟಿಂಗ್ ಕೌಚ್ ವಿರೋಧಿಸಿ ನಡೆಸಿದ್ದ ಪ್ರತಿಭಟನೆಗೆ ಶ್ರೀರೆಡ್ಡಿ, ಪವನ್ ಕಲ್ಯಾಣ ಅವರ ನೆರವು ಕೇಳಿದ್ದಕ್ಕೆ ಪವನ್ ಅವರು ಶ್ರೀರೆಡ್ಡಿ ಮಾಧ್ಯಮಗಳ ಜತೆಗೆ ಮಾತನಾಡುತ್ತಾ, ಪೊಲೀಸರಿಗೆ ದೂರು ನೀಡಬೇಕಿತ್ತು ಎಂದು ಸಲಹೆ ನೀಡಿದ್ದರು. ಇದರಿಂದ ಕೋಪಗೊಂಡ ಶ್ರೀರೆಡ್ಡಿ ಅವರು ಮೂರು ಮದುವೆಗಳನ್ನು ಮಾಡಿಕೊಂಡಿರುವ ಪವನ್ ಕಲ್ಯಾಣ್‌ಗೆ ಮಹಿಳೆಯರೆಂದರೆ ಗೌರವ ಇದೆಯೇ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದ್ದರು.


ಶ್ರೀರೆಡ್ಡಿ ಅವರ ಈ ಹೇಳಿಕೆ ಪವನ್ ಕಲ್ಯಾಣ ಅವರ ಅಭಿಮಾನಿಗಳನ್ನು ಕೆರಳಿಸಿದ್ದು, ಇದೀಗ ಅವರ ಅಭಿಮಾನಿ ಶಶಾಂಕ್ ವಂಶಿ ಎಂಬುವವರು ಶ್ರೀರೆಡ್ಡಿ ಮೇಲೆ ಹೈದರಾಬಾದ್‌ ನ ಪಂಜಾಗುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸುಶ್ಮಿತಾ ಸೇನ್ ಮಾಜಿ ಪ್ರಿಯಕರನನ್ನು ನೆನೆಸಿಕೊಳ್ಳಲು ಕಾರಣವೇನು ಗೊತ್ತಾ..?