Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಭಾನುವಾರ, 20 ಜನವರಿ 2019 (09:04 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮನೆಗೆ ಸಂಬಂಧಪಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೀರಿ. ಹೊಸ ವಸ್ತುಗಳ ಖರೀದಿ ಮಾಡುವಿರಿ. ಖರ್ಚು ವೆಚ್ಚಗಳು ಇತಿಮಿತಿಯಲ್ಲಿರಲಿ. ಆರೋಗ್ಯ ಸಮಸ್ಯೆಗಳು ದೂರವಾಗಿ ನೆಮ್ಮದಿ ಕಾಣುವಿರಿ.

ವೃಷಭ: ಕಾರ್ಯದೊತ್ತಡಗಳು ಹೆಚ್ಚಾಗಿ ದೇಹಾಯಾಸ ಮಾಡಿಕೊಳ‍್ಳುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ. ಮನೆಯಲ್ಲಿ ಶುಭ ಕಾರ್ಯ ನೆರವೇರಿಸುವಿರಿ. ಸಂಗಾತಿಯೊಂದಿಗೆ ಸರಸಮಯ ಕ್ಷಣ ಕಳೆಯುವಿರಿ.

ಮಿಥುನ: ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಚಿಂತೆ ಕಾಡುವುದು. ಆದರೆ ಅವಗಣನೆ ಕೂಡಾ ಮನಸ್ಸಿಗೆ ಬೇಸರ ತರುವುದು. ಆದರೆ ತಾಳ್ಮೆಯಿಂದ ನಿಭಾಯಿಸಿದರೆ ಯಶಸ್ಸು. ಆರ್ಥಿಕವಾಗಿ ಇಂದು ಖರ್ಚು ವೆಚ್ಚಗಳು ಅಧಿಕವಾಗುವುದು. ಆದರೆ ಅಷ್ಟೇ ಧನ ಲಾಭವೂ ಆಗಲಿದೆ.

ಕರ್ಕಟಕ: ಬಂಧು ಮಿತ್ರರೊಂದಿಗೆ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸುವಿರಿ. ದೂರ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಕಳ್ಳತನವಾಗುವ ಅಪಾಯವಿದೆ. ಮನೆಯಿಂದ ಹೊರಹೋಗುವ ಮೊದಲು ಆಂಜನೇಯನನ್ನು ಸ್ಮರಣೆ ಮಾಡಿಕೊಂಡು ಹೋಗಿ.

ಸಿಂಹ: ದಾಯಾದಿಗಳ ಜತೆಗಿನ ಕಲಹ ತಲೆದೋರಿ ಕುಟುಂಬದಲ್ಲಿ ನೆಮ್ಮದಿಗೆ ಭಂಗ ಬರುವುದು. ಹಿರಿಯರ ಸಲಹೆ, ಸೂಚನೆ ಪಾಲಿಸುವುದು ಅಗತ್ಯ. ಕೋರ್ಟ್, ಕಚೇರಿ ವ್ಯವಹಾರಗಳನ್ನು ಸದ್ಯಕ್ಕೆ ಮಾಡದೇ ಇರುವುದೇ ಒಳ್ಳೆಯದು. ದೇವರ ಪ್ರಾರ್ಥನೆ ಅಗತ್ಯ.

ಕನ್ಯಾ: ಯಾರಿಗೋ ಆಗಬೇಕಾದ ತೊಂದರೆ ಅನವಶ್ಯವಾಗಿ ನಿಮಗೆ ಎದುರಾಗಿ ಕಿರಿ ಕಿರಿ ಅನುಭವಿಸುವಿರಿ. ಆದರೆ ತಾಳ್ಮೆಯಿರಲಿ. ವಾಚಾಳಿಗಳು, ಕಲಹಪ್ರಿಯರಿಂದ ದೂರವಿದ್ದರೆ ಉತ್ತಮ. ದಿನದಂತ್ಯಕ್ಕೆ ಶುಭ ಸುದ್ದಿ.

ತುಲಾ: ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ. ಪ್ರೇಮಿಗಳಿಗೆ ಮನೆಯಲ್ಲಿ ಕೊಂಚ ವಿರೋಧ ವ್ಯಕ್ತವಾಗುವುದು. ಸಂತಾನ ಭಾಗ್ಯ ಬಯಸುತ್ತಿರುವ ದಂಪತಿಗಳಿಗೆ ಶುಭ ಸೂಚನೆಯಿದೆ. ಹೆಚ್ಚಿನ ಫಲಗಳಿಗೆ ಸುಬ್ರಹ್ಮಣ್ಯನ ಆರಾಧನೆ ಮಾಡಿ.

ವೃಶ್ಚಿಕ: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉದಾಸೀನ ಪ್ರವೃತ್ತಿ ಕಂಡುಬರಲಿದೆ. ಅನಿರೀಕ್ಷಿತವಾಗಿ ಬರುವ ನೆಂಟರಿಂದ ಶುಭಸುದ್ದಿಯೊಂದು ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.

ಧನು: ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಇಂದು ಮುಕ್ತಿ ಸಿಗಲಿದೆ. ಹೊಸ ಸಂಬಂಧಗಳು ಹುಡುಕಿಕೊಂಡು ಬರುವುದು. ಹೊಸ ಜನರ ಭೇಟಿ ಮಾಡುವಿರಿ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ಮಕರ: ನೆಮ್ಮದಿಗೆ ಭಂಗ ತರುವಂತಹ ಘಟನೆಯೊಂದು ನಡೆಯಲಿದೆ. ಸಂಗಾತಿಯೊಂದಿಗೆ ಕಿರಿ ಕಿರಿ ಮಾಡಿಕೊಳ್ಳುತ್ತೀರಿ. ನಯವಂಚಕರಿಂದ ದೂರವಿರುವುದೇ ಒಳ್ಳೆಯದು. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ಆದರೆ ದಿನದಂತ್ಯಕ್ಕೆ ಪರಿಸ್ಥಿತಿ ಸುಧಾರಿಸಲಿದೆ.

ಕುಂಭ: ವಾಣಿಜ್ಯೋದ್ಯಮಿಗಳಿಗೆ ಇಂದು ಶುಭ ದಿನ. ನಿರೀಕ್ಷಿತ ಲಾಭ ಪಡೆದು ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ಆದರೆ ಉದ್ಯೋಗಾರ್ಥಿಗಳಿಗೆ ಇಂದೂ ಕಾರ್ಯದೊತ್ತಡವಿರಲಿದ್ದು, ದೇಹಾಯಾಸವಾದೀತು. ಮನೆಯಲ್ಲಿ ನೆಮ್ಮದಿಯ ವಾತಾವರಣವಿರಲಿದೆ.

ಮೀನ: ಮನೆಯಲ್ಲಿರುವ ಹಿರಿಯರ ಆರೋಗ್ಯ ಹದಗೆಡಲಿದೆ. ಹೊಸ ವೃತ್ತಿ ಮಾಡಲು ಹೊರಟಿದ್ದರೆ ಇದುವೇ ಸಕಾಲ. ಅವಿವಾಹಿತರಿಗೆ ಮನಸ್ಸಿಗೆ ಒಪ್ಪುವಂತಹ ಸಂಬಂಧಗಳು ಕೂಡಿಬರುವುದು. ಆದರೆ ಅತಿಯಾಗಿ ಯಾರನ್ನೂ ನಂಬಲು ಹೋಗಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

Share this Story:

Follow Webdunia kannada

ಮುಂದಿನ ಸುದ್ದಿ

ಶನಿವಾರಗಳಂದು ಈ ಎಂಟು ವಸ್ತುಗಳನ್ನು ಖರೀದಿಸಿದರೆ ಅಪಾಯ ತಪ್ಪಿದ್ದಲ್ಲ!