ಇಂದು ಹನುಮಾನ ಜಯಂತಿಯಾಗಿದ್ದು ಹಿಂದೂ ಭಕ್ತರು ಶ್ರದ್ಧಾ ಭಕ್ತಿಯಿಂದ ಆಂಜನೇಯ ಸ್ವಾಮಿಯನ್ನು ಆರಾಧಿಸುತ್ತಿದ್ದಾರೆ. ಈ ದಿನಕ್ಕೆ ಆಂಜನೇಯ ಸ್ವಾಮಿಯ ವಿಶೇಷ ಗುಣವೊಂದರ ಬಗ್ಗೆ ತಿಳಿದುಕೊಳ್ಳೋಣ.
credit: social media
ಹನುಮಂತ ಚಿರಂಜೀವಿಯಾಗಿದ್ದು, ಕಲಿಯುಗದ ಅಂತ್ಯದವರೆಗೂ ಅವನು ಜೀವಂತವಾಗಿರುತ್ತಾನೆ
ಬಾಲ್ಯದಲ್ಲಿ ಮಾಡಿದ ತುಂಟಾಟದ ಫಲವಾಗಿ ತನ್ನ ಶಕ್ತಿ ಮರೆತುಹೋಗಲೆಂದು ಋಷಿಗಳಿಂದ ಶಾಪ ಪಡೆದಿದ್ದ
ರಾಮನ ಭಕ್ತಿಗೆ ಪ್ರತಿಫಲ ಬೇಡವೆಂದು ಸೀತಾದೇವಿ ನೀಡಿದ್ದ ಮುತ್ತಿನ ಹಾರವನ್ನೇ ನಿರಾಕರಿಸಿದ್ದ
ಸೀತೆ ರಾಮನ ಆಯಸ್ಸಿಗಾಗಿ ಕುಂಕುಮ ಹಚ್ಚಿಕೊಳ್ಳುವುದನ್ನು ನೋಡಿ ತಾನು ಮೈಯೆಲ್ಲಾ ಕೇಸರಿ ಬಣ್ಣ ಹಚ್ಚಿಕೊಂಡ
ಶ್ರೀರಾಮನ ಆತ್ಮ ಒಯ್ಯಲು ಬಂದ ಯಮನನ್ನೇ ತಡೆಯಲು ಹೋಗಿದ್ದ ಮಹಾನ್ ಭಕ್ತ ಆಂಜನೇಯ
ಬ್ರಹ್ಮಚಾರಿ ಆಂಜನೇಯನಿಗೂ ಓರ್ವ ಪುತ್ರನಿದ್ದ, ಅವನ ಬೆವರನ್ನು ನುಂಗಿದ ಮೀನು ಮಕರಧ್ವಜ ಎಂಬ ಪುತ್ರನ ಪಡೆದಿತ್ತು
ರಾಮನ ಬಂಟ ಹನುಮನಿಗೆ ಸಮಯಕ್ಕೆ, ಅಗತ್ಯಕ್ಕೆ ತಕ್ಕಂತೆ ತನ್ನ ದೇಹವನ್ನು ಹಿರಿದು, ಕಿರಿದು ಮಾಡುವ ವರವಿತ್ತು