Webdunia - Bharat's app for daily news and videos

Install App

ಕರ್ನಾಟಕದಲ್ಲಿನ 12 ಪ್ರಮುಖ ಐತಿಹಾಸಿಕ ಸ್ಥಳಗಳು

ಲಾಲ್‌ಸಾಬ್
ಬುಧವಾರ, 20 ಡಿಸೆಂಬರ್ 2017 (16:08 IST)
ಐತಿಹಾಸಿಕ ಸ್ಥಳ, ಸ್ಮಾರಕಗಳು, ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳನ್ನು ಒಳಗೊಂಡಂತೆ ಹಲವಾರು ಪ್ರವಾಸಿ ಆಕರ್ಷಣೆಗಳಿಗೆ ಕರ್ನಾಟಕ ಹೆಸರುವಾಸಿಯಾಗಿದೆ. ರಾಜ್ಯವು ಪ್ರವಾಸೋದ್ಯಮಕ್ಕಾಗಿ ಭಾರತದಲ್ಲಿ ಐದನೇ ಸ್ಥಾನದಲ್ಲಿದೆ ಮತ್ತು ದೇಶಕ್ಕೆ 3600 ಸಂರಕ್ಷಿತ ಸ್ಮಾರಕಗಳನ್ನು ಕೊಡುಗೆಯಾಗಿ ನೀಡಿದೆ, 

ಪ್ರಾಚೀನ ಶಿಲ್ಪ ದೇವಾಲಯಗಳು, ವಿಶ್ವ ಪರಂಪರೆ ಕೇಂದ್ರಗಳು ಮತ್ತು ಗೋಲ್ ಗುಂಬಜ್, ದೋಡಬಸಪ್ಪ ದೇವಸ್ಥಾನ, ಲಕ್ಕುಂಡಿ ಸ್ಮಾರಕಗಳು ಮತ್ತು ಅವಳಿ ಗೋಪುರಗಳುಳ್ಳ ದೇವಸ್ಥಾನಗಳಂತಹ ಅದ್ಭುತ ವಾಸ್ತುಶಿಲ್ಪವನ್ನು ಹೊಂದಿದೆ.
 
ಹಂಪಿ ಸ್ಮಾರಕಗಳು, ಹಂಪಿ
ತುಂಗಭದ್ರಾ ನದಿಯ ದಡದಲ್ಲಿರುವ ಹಂಪಿ ಗ್ರಾಮವು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿದ್ದು, ತಾಲೂಕು ಕೇಂದ್ರದಿಂದ 13 ಕಿಮೀ ದೂರದಲ್ಲಿದೆ. ಹಂಪಿಯಲ್ಲಿರುವ ಸ್ಮಾರಕಗಳ ಗುಂಪು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ವಿಜಯನಗರ ನಗರದ ಅವಶೇಷಗಳಾಗಿವೆ. ಹಂಪಿ ಗ್ರಾಮವು ವಿರುಪಾಕ್ಷ ದೇವಾಲಯ, ಹಂಪಿ ಬಜಾರ್‌, ಹಜಾರ ರಾಮನ ಗುಡಿ, ಸಾಸಿವೆ ಕಾಳು ಗಣೇಶ, ಉಗ್ರ ನರಸಿಂಹ, ಬುಕ್ಕರ ಮೇಲ್ಗಾಲುವೆ, ಆನೆ ಸ್ಥಿರ ಸ್ಮಾರಕ, ತಲರಿಗಟ್ಟಾ ಗೇಟ್‌ನಂತಹ ಹಲವು ಸ್ಮಾರಕಗಳ ನೆಲೆಯಾಗಿದೆ ಮತ್ತು ಹಂಪಿಯು ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನಪ್ರಿಯ ಐತಿಹಾಸಿಕ ಸ್ಥಳವಾಗಿದೆ. ಹಂಪಿಗೆ ಭೇಟಿ ನೀಡುವ ಅತ್ಯುತ್ತಮ ಸಮಯವೆಂದರೆ ಅಕ್ಟೋಬರ್‌‌ದಿಂದ ಮಾರ್ಚ್.
 
ಪಟ್ಟದಕಲ್ಲು ಸ್ಮಾರಕಗಳು, ಪಟ್ಟದಕಲ್ಲು
ಪಟ್ಟದಕಲ್ಲು ಬಾಗಲಕೋಟೆ ಜಿಲ್ಲೆಯ ಪ್ರಸಿದ್ಧ ಪರಂಪರೆ ತಾಣವಾಗಿದ್ದು, ತಾಲೂಕು ಕೇಂದ್ರ ಬಾದಾಮಿಯಿಂದ 21 ಕಿಮೀ ದೂರದಲ್ಲಿದೆ. ಪಟ್ಟದಕಲ್ಲಿನ ಸ್ಮಾರಕಗಳ ಸಮೂಹವು ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ ಮತ್ತು ಭಾರತದಲ್ಲಿನ ವಿಶ್ವ ಪರಂಪರೆಯ ತಾಣವಾಗಿದ್ದು, ಬಾದಾಮಿ ಮತ್ತು ಐಹೊಳೆ ಚಾಲುಕ್ಯರ ಸಮೂಹಗಳೆಂದು ಕರೆಯಲ್ಪಡುತ್ತದೆ. ಪಟ್ಟದಕಲ್ಲು ಸ್ಮಾರಕಗಳು ನಾಗರ ಮತ್ತು ದ್ರಾವಿಡ ಶೈಲಿಯ ವಾಸ್ತುಶಿಲ್ಪದ ಶೈಲಿಗಳನ್ನು ಹೊಂದಿರುವ ಹಿಂದೂ ದೇವಸ್ಥಾನ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆಯಾಗಿವೆ. ಇದು ಮಲಪ್ರಭಾ ನದಿಯ ದಡದಲ್ಲಿದೆ.  ಪಟ್ಟದಕಲ್ಲು ಚಾಲುಕ್ಯರ ರಾಜರುಗಳ ಪಟ್ಟಾಭಿಷೇಕ ನಡೆಯುವ ಸ್ಥಳವಾಗಿದೆ. ಪಟ್ಟದಕಲ್ಲು ಕರ್ನಾಟಕದ ಜನಪ್ರಿಯ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ.
 
ಬೀದರ್ ಕೋಟೆ, ಬೀದರ್
ಬೀದರ್ ಎಂಬುದು ಬೆಟ್ಟದ ಮೇಲಿರುವ ನಗರವಾಗಿದ್ದು, ವಾಸ್ತುಶಿಲ್ಪ, ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾಗಿದೆ. ನಗರದಲ್ಲಿರುವ ಕೋಟೆಯನ್ನು ಹಲವಾರು ಸ್ಮಾರಕಗಳೊಂದಿಗೆ ನಿರ್ಮಿಸಲಾಗಿದೆ, ಬೀದರ್ ಕೋಟೆ ಮತ್ತು ಏಳು ದ್ವಾರಗಳ ಒಳಗೆ ಸುಮಾರು 30 ಸ್ಮಾರಕಗಳು ಇವೆ. 1430 ರಲ್ಲಿ ಅಹಮದ್ ಶಾ ನಿರ್ಮಿಸಿದ ಕೋಟೆಯು ಬೀದರ್‌‌ನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ರಂಗಿನ್ ಮಹಲ್, ಸೋಲಾಹ್ ಕಾಂಬ್ ಮಸೀದಿ, ಗಗನ್ ಮಹಲ್, ದಿವಾನ್-ಇ-ಆಮ್, ರಾಯಲ್ ಪೆವಿಲಿಯನ್, ತರ್ಕಶ್ ಮಹಲ್, ಬಹ್ಮಣಿ ಆಡಳಿತಗಾರರ ಗೋರಿಗಳು, ಬರಿದ್ ಶಾಹೀ ಸಮಾಧಿಗಳು, ಮಹ್ಮೂದ್ ಗವನ್, ಚೌಬರಾ, ಗುರು ನಾನಕ್, ಬಸವಕಲ್ಯಾಣ, ನರಸಿಂಹ ಝರನಾ, ಪಾಪ್‌ನಾಶ್ ದೇವಸ್ಥಾನಗಳು ಬೀದರ್‌‌ನ ಇತರ ಆಕರ್ಷಣೆಗಳಾಗಿವೆ.
 
ಹೊಯ್ಸಳೇಶ್ವರ ದೇವಸ್ಥಾನ, ಹಳೆಬೀಡು

 
ಹೊಯ್ಸಳೇಶ್ವರ ದೇವಸ್ಥಾನವು ಹಿಂದೂ ದೇವರಾದ ಶಿವನಿಗೆ ಸಮರ್ಪಿತವಾಗಿದೆ. ಇದು ಹೊರ ಗೋಡೆಯ ಉದ್ದಕ್ಕೂ ಚಲಿಸುವ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಹೊಯ್ಸಳೇಶ್ವರ ದೇವಸ್ಥಾನ ಮತ್ತು ಕೇದಾರೇಶ್ವರ ದೇವಸ್ಥಾನ ಸಂಕೀರ್ಣವು ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
 
ಐಹೊಳೆ ಐತಿಹಾಸಿಕ ದೇವಾಲಯಗಳು, ಐಹೊಳೆ
ಐಹೊಳೆ ಗ್ರಾಮವು ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ದೇವಾಲಯಗಳ ಸಂಕೀರ್ಣವಾಗಿದ್ದು, ಉತ್ತರ ಕರ್ನಾಟಕದ ಜನಪ್ರಿಯ ಪ್ರವಾಸಿ ತಾಣವಾಗಿದೆ. ದೇವಾಲಯದ ಸಂಕೀರ್ಣವು ವಾಸ್ತುಶಿಲ್ಪದ ರಚನೆಗಳು, ಸ್ಮಾರಕಗಳು ಮತ್ತು ಚಾಲುಕ್ಯರ ಕಾಲದಿಂದ 125 ಕಲ್ಲಿನ ದೇವಾಲಯಗಳನ್ನು ಹೊಂದಿದೆ.
 
ಮಹಾಕೂಟ ದೇವಾಲಯಗಳ ಸಮೂಹ, ಮಹಾಕೂಟ
ಚಾಲುಕ್ಯ ವಂಶದ ಆರಂಭಿಕ ರಾಜರು ನಿರ್ಮಿಸಿದ ಹಿಂದೂಗಳ ಪೂಜೆಯ ಪ್ರಮುಖ ಸ್ಥಳವೆಂದರೆ ಮಹಾಕೂಟ ಗುಂಪಿನ ದೇವಾಲಯ. ಮಹಾಕೂಟ ಸಂಕೀರ್ಣವು ಚಾಲುಕ್ಯರ ವಂಶಾವಳಿ, ವಿಜಯಗಳು ಮತ್ತು ಸ್ಮಾರಕಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ. ಈ ಗ್ರಾಮವು ಜಿಲ್ಲಾ ಕೇಂದ್ರ ಬಾಗಲಕೋಟೆಯಿಂದ 36 ಕಿಮೀ ದೂರದಲ್ಲಿದೆ. 
 
ಬಸವಕಲ್ಯಾಣ ಕೋಟೆಯ ಸ್ಮಾರಕಗಳು, ಬೀದರ್
ಬೀದರ್ ಜಿಲ್ಲೆಯಲ್ಲಿರುವ ಬಸವಕಲ್ಯಾಣ ಕೋಟೆಯು ಏಳು ದ್ವಾರಗಳು ಮತ್ತು ಸ್ಮಾರಕಗಳನ್ನು ಹೊಂದಿದೆ ಮತ್ತು ಬಸವಣ್ಣನವರ ಕರ್ಮಭೂಮಿ ಎಂದೂ ಸಹ ಪ್ರಸಿದ್ಧವಾಗಿದೆ. ಬಸವಕಲ್ಯಾಣ ಕೆಲವು ಇಸ್ಲಾಮಿಕ್ ಸ್ಮಾರಕಗಳಾದ ಮೋತಿ ಮಹಲ್, ಹೈದರಿ ಮಹಲ್, ಪೀರನ್ ದುರ್ಗಾ ಮತ್ತು ಈ ಕೋಟೆಯ ಗೋಡೆಗಳ ಮೇಲೆ ಜೈನ ಚಿತ್ರಗಳನ್ನು ಮತ್ತು ನಾರಾಯಣಪುರದಲ್ಲಿ ಶಿವವ ದೇವಸ್ಥಾನವನ್ನೂ ಸಹ ಹೊಂದಿದೆ.
 
ಲಕ್ಷ್ಮೇಶ್ವರ ಟ್ರೇಡಿಂಗ್ ಟೌನ್, ಗದಗ
ಲಕ್ಷ್ಮೇಶ್ವರವು ಹಲವಾರು ಪ್ರಮುಖ ಹಿಂದೂ ದೇವಾಲಯಗಳು, ಪ್ರಾಚೀನ ಜೈನ ದೇವಸ್ಥಾನಗಳು ಮತ್ತು ಗಮನಾರ್ಹ ಜಮ್ಮಾ ಮಸೀದಿಯನ್ನು ಹೊಂದಿರುವ ಪ್ರಮುಖ ಕೃಷಿ ವ್ಯಾಪಾರದ ಪಟ್ಟಣವಾಗಿದೆ. ಲಕ್ಷ್ಮೇಶ್ವರವು ಹಲವಾರು ಸಣ್ಣ ಪುಣ್ಯಕ್ಷೇತ್ರಗಳು ಮತ್ತು ಪ್ರಸಿದ್ಧ ಸೋಮೇಶ್ವರ ದೇವಸ್ಥಾನದ ನೆಲೆಯಾಗಿದೆ. ಇದು ಜಿಲ್ಲಾ ಕೇಂದ್ರ ಗದಗದಿಂದ 43 ಕಿಮೀ ದೂರದಲ್ಲಿದೆ.
 
ಬಾದಾಮಿ ಗುಹೆ ದೇವಾಲಯಗಳು, ಬಾದಾಮಿ
ಚಾಲುಕ್ಯರ ಎರಡನೇ ರಾಜಧಾನಿ ಮತ್ತು ಈಗಿನ ತಾಲೂಕು ಕೇಂದ್ರ ಬಾದಾಮಿಯು ಜಿಲ್ಲಾ ಕೇಂದ್ರ ಬಾಗಲಕೋಟೆಯಿಂದ 34 ಕಿಮೀ ದೂರದಲ್ಲಿದೆ. ಗುಹಾ ದೇವಾಲಯಗಳು, ಕೋಟೆಗಳು, ಉತ್ತಮವಾದ ಕೆತ್ತನೆಗಳು, ಅದ್ಭುತ ವಾಸ್ತುಶಿಲ್ಪ ಮತ್ತು ದೃಶ್ಯಗಳಿಗೆ ಬಾದಾಮಿ ಹೆಸರುವಾಸಿಯಾಗಿದೆ. ಬಾದಾಮಿ ದೇವಾಲಯ ಸಂಕೀರ್ಣವನ್ನು ಭಾರತೀಯ ರಾಕ್‌-ಕಟ್‌ ವಾಸ್ತುಶೈಲಿಯ ಅತ್ಯುತ್ತಮ ಉದಾಹರಣೆ ಎಂದು ಪರಿಗಣಿಸಲಾಗಿದೆ. ಇದು ಸುತ್ತಲೂ ಬೆಟ್ಟಗಳು, ಕೋಟೆಗಳು ಮತ್ತು ಕೃತಕ ಸರೋವರದಿಂದ ಆವೃತ್ತವಾಗಿದೆ.
 
ಸೋಮನಾಥಪುರ ಪಾರಂಪರಿಕ ತಾಣ, ಸೋಮನಾಥಪುರ
ಸೋಮನಾಥಪುರ ಐತಿಹಾಸಿಕ ಸ್ಥಳವು ಮೈಸೂರು ನಗರದ ಸಮೀಪದಲ್ಲಿದ್ದು ಇದು ಕೇಶವ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಈ ದೇವಸ್ಥಾನವು ಪುರಾತತ್ತ್ವ ಶಾಸ್ತ್ರದ ಸಮೀಕ್ಷೆಯ ರಕ್ಷಣೆಗಾಗಿ ರಕ್ಷಿತ ಪರಂಪರೆ ತಾಣವಾಗಿದೆ ಮತ್ತು ಹೊಯ್ಸಳ ವಾಸ್ತುಶೈಲಿಗೆ ಉತ್ತಮ ಉದಾಹರಣೆಯಾಗಿದೆ.
 
ಚೆನ್ನಕೇಶವ ದೇವಸ್ಥಾನ, ಬೇಲೂರು
ಚೆನ್ನಕೇಶವ ದೇವಸ್ಥಾನವನ್ನು ವಿಜಯನಾರಾಯಣ ದೇವಸ್ಥಾನ ಎಂತಲೂ ಕರೆಯಲಾಗುತ್ತದೆ. ಇದು ಯಗಚಿ ನದಿಯ ದಡದಲ್ಲಿದೆ ಮತ್ತು ಇದು ತನ್ನ ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯ ಸಂಕೀರ್ಣವು ಕರ್ನಾಟಕ ರಾಜ್ಯದ ಪ್ರಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
 
ಲಕ್ಕುಂಡಿಯ ಪಾಳುಬಿದ್ದ ದೇವಾಲಯಗಳು, ಗದಗ
ಗದಗ ಜಿಲ್ಲೆಯ ಲಕ್ಕುಂಡಿಯು ಸಂಪೂರ್ಣವಾಗಿ ಪಾಳುಬಿದ್ದ ದೇವಾಲಯಗಳಿಂದ ಕೂಡಿದೆ. ಲಕುಂಡಿ ಗ್ರಾಮವು ಪಾಳುಬಿದ್ದ ದೇವಸ್ಥಾನಗಳಿಂದ ತುಂಬಿಹೋಗಿದೆ, ಇದು ಹಾಳು ಬಾವಿಗಳು, 50 ದೇವಾಲಯಗಳು ಮತ್ತು ಶಾಸನಗಳುಳ್ಳ ಪ್ರಾಚೀನ ಆಸಕ್ತಿಯ ಸ್ಥಳವಾಗಿದೆ. ಹಂಪಿಗೆ ಹೋಗುವ ದಾರಿಯಲ್ಲಿ ಸಣ್ಣ ಗ್ರಾಮವು ದೇವಸ್ಥಾನದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments