Webdunia - Bharat's app for daily news and videos

Install App

ಮೂತ್ರ ಪಿಂಡಗಳನ್ನು ಶುದ್ಧಿಕರಿಸುತ್ತದೆಯಂತೆ ಈ ಸೊಪ್ಪಿನ ಕಷಾಯ

Webdunia
ಶುಕ್ರವಾರ, 8 ಜೂನ್ 2018 (14:06 IST)
ಬೆಂಗಳೂರು :  ಮಾನವ ದೇಹಕ್ಕೆ ಮೂತ್ರ ಪಿಂಡಗಳು ತುಂಬಾನೇ ಸಹಕಾರಿಯಾಗಿದೆ. ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುವ ಕಾರ್ಯವನ್ನು ಇವುಗಳು ಮಾಡುತ್ತವೆ. ಮೂತ್ರಪಿಂಡಗಳು ಮಾನವನ ದೇಹಕ್ಕೆ ತುಂಬಾನೇ ಅತ್ಯಗತ್ಯವಾಗಿದೆ. ರಕ್ತವನ್ನು ಶುದ್ಧಿಕರಿಸುವ ಈ ಮೂತ್ರ ಪಿಂಡಗಳನ್ನು ನಾವು ಶುದ್ದೀಕರಿಸಬೇಕು. ಇದಕ್ಕೆ ಮದ್ದು ನಿಮ್ಮ ಮನೆಯೇ ಇದೆ. 

ಮನೆ ಮದ್ದು ತಯಾರಿಸುವ ವಿಧಾನ:

ಮೊದಲನೆಯದಾಗಿ ಒಳ್ಳೆಯ ಕೊತ್ತಂಬರಿ ಸೊಪ್ಪನ್ನು ತೊಳೆದು ಕತ್ತರಿಸಿ, ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸ್ವಲ್ಪಹೊತ್ತು ನೆನೆಸಿಡಬೇಕು. ನಂತರ ಕೆಲವು ನಿಮಿಷಗಳ ಕಾಲ ಕುದಿಸಬೇಕು.ಕುದಿಸಿದ ನಂತರ ಪಾತ್ರೆಯನ್ನು ಸ್ಟೌ ನಿಂದ ಕೆಳಗಿಳಿಸಿ, ಮುಚ್ಚಳದಿಂದ ಮುಚ್ಚಿ ಸ್ವಲ್ಪ ಹೊತ್ತು ಆರಲು ಬಿಡಬೇಕು.  ಅದು ತಣ್ಣಗಾದ ಮೇಲೆ ,ಒಂದು ಶುಭ್ರವಾದ ಬಟ್ಟೆಯಿಂದ ಸೋಸಿಕೊಂಡು,ಫ್ರಿಡ್ಜ್ ನಲ್ಲಿಟ್ಟುಕೊಳ್ಳಬೇಕು.

 

ದಿನಕ್ಕೆ ಒಂದು ಲೋಟದಂತೆ ,ತಿಂಗಳಲ್ಲಿ ಎರಡು ಬಾರಿ ಈ ಕಷಾಯವನ್ನು ಸೇವಿಸಬೇಕು. ಇದನ್ನು ಕುಡಿದ ನಂತರ, ಶರೀರದಲ್ಲಿರುವ ಕಲ್ಮಶಗಳು ಹೊರಹೋಗುವುದರಿಂದ ಮೂತ್ರದ ಬಣ್ಣ ಬದಲಾಗುತ್ತದೆ. ಈ ಕಷಾಯದ ಒಟ್ಟಿಗೆ ಪ್ರತಿ ದಿನವೂ ಸಾಧ್ಯವಾದಷ್ಟು ದ್ರವ ಪದಾರ್ಥಗಳನ್ನು ಸೇವಿಸುವುದರಿಂದ ಅಧಿಕ ಲಾಭವಾಗುತ್ತದೆ.

 

ಪ್ರಾಯದ ಹುಡುಗಿಯರು ಹಾಗು ಮಹಿಳೆಯರಿಗೆ ಋತು ಸಮಯದಲ್ಲಿ ಉಂಟಾಗುವ ನೋವುಗಳನ್ನು ಈ ಕಷಾಯ ನಿವಾರಿಸುತ್ತದೆ.

ಆದರೆ ಕಿಡ್ನಿ ಸ್ಟೋನ್ ಇರುವವರು ಈ ಕಷಾಯವನ್ನು ಸೇವಿಸಬಾರದು. ಏಕೆಂದರೆ ಈ ಕಷಾಯವನ್ನು ಸೇವಿಸುವುದರಿಂದ ಇತರೆ ಸಮಸ್ಯೆಗಳು ಬರಬಹುದು ಹಾಗು ಗರ್ಭಿಣಿ ಹೆಂಗಸರು ಈ ಕಷಾಯವನ್ನು ಸೇವಿಸಬೇಕಾದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕುಡಿಯಿರಿ 'ರಾಗಿ ಅಂಬಲಿ': ಇಳಿಸಿಕೊಳ್ಳಿ ಬಿಸಿಲ ಧಗೆ

ಮೊಟ್ಟೆಯ ಹಳದಿ ಲೋಳೆಯಿಂದ ಆರೋಗ್ಯಕ್ಕೆ ಈ ಮ್ಯಾಜಿಕ್ ಗ್ಯಾರಂಟಿ

ಯೋಗ ಮಾಡುವ ಮೊದಲು ನೀರು, ಆಹಾರ ಸೇವಿಸಬಹುದೇ

ಹಸಿ ಹಾಲು ಬಳಸಿ ಫೇಸ್ ಪ್ಯಾಕ್ ಹೀಗೆ ತಯಾರಿಸಿ ನೋಡಿ

ಇಂದು ವಿಶ್ವ ಕಿಡ್ನಿ ದಿನಾಚರಣೆ: ಹೆಚ್ಚುತ್ತಿದೆ ಬಿಸಿಲ ಧಗೆ, ಮೂತ್ರಪಿಂಡದ ಖಾಯಿಲೆಗಳ ಬಗ್ಗೆ ಇರಲಿ ಎಚ್ಚರ

ಮುಂದಿನ ಸುದ್ದಿ
Show comments