Webdunia - Bharat's app for daily news and videos

Install App

ನಿರಂತರ ಪ್ರಯತ್ನಗಳಿಂದ ಹೊಸ ಆಸೆ ಚಿಗುರುತ್ತದೆ: ಹೊಸ ವರ್ಷಕ್ಕೆ ಸ್ವಾಗತ

jaideep karnik
ಗುರುವಾರ, 28 ಡಿಸೆಂಬರ್ 2017 (20:53 IST)
ಹೊಸ ವರ್ಷದ ಹೊಸ್ತಿಲಲ್ಲಿರುವಾಗ ಹಿಂದಿನ ವರ್ಷದ ನೆನಪಾಗುತ್ತದೆ, ವರ್ಷಗಳು ಸಣ್ಣ ಚುಕ್ಕೆ ಮಾತ್ರವಾಗಿರಬಹುದು, ಆದರೆ ಅದು ಬದಲಾವಣೆಯೊಂದಿಗೆ ಪ್ರಾರಂಭವಾಗುತ್ತದೆ ..... ಅದು ಸ್ಥಿರ ಮತ್ತು ನಿರಂತರ ಪ್ರಕ್ರಿಯೆಯಾಗಿದೆ. ಗೋಡೆಯ ಮೇಲೆ ಹೊಸ ವರ್ಷದ ಕ್ಯಾಲೆಂಡರ್ ನೇತಾಡುವ ಮೊದಲು ಸತ್ಯಗಳು ಮತ್ತು ಅಂಕಿ ಸಂಖ್ಯೆಗಳು ಬದಲಾಗುತ್ತವೆ,

ಇದು ನಾವು ಹಿಂತಿರುಗಿ ನೋಡುತ್ತಿರುವ ಸಮಯವಾಗಿರುವುದಲ್ಲದೇ ಭವಿಷ್ಯದ ಕನಸುಗಳಿಗಾಗಿ ನಮ್ಮನ್ನು ನಾವೇ ಸಿದ್ದಪಡಿಸಿಕೊಳ್ಳುವುದಾಗಿದೆ. ಈ ಸಮಯದ ಬದಲಾವಣೆಯಿಂದ ನಾವು ನಮ್ಮ ಜೀವನ, ಥ್ರಿಲ್ಸ್ ಮತ್ತು ಇತರ ಅಳತೆಗೋಲುಗಳ ಬಗ್ಗೆ ಯೋಚಿಸುವಂತೆ ಮಾಡುವ ಸಮಯದ ನಿರೀಕ್ಷೆಯಲ್ಲಿರುವಾಗ ಅದರಲ್ಲಿ ಹಾನಿ ಇಲ್ಲ ಎನ್ನಬಹುದಾಗಿದೆ.
 
ವಿಶ್ವ ಮಟ್ಟದಲ್ಲಿ, ಹಿಂಸಾತ್ಮಕ ವಿರೋಧ ಮತ್ತು ತೀವ್ರ ಬೆಂಬಲದ ಮಧ್ಯೆ ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಆಯ್ಕೆ ಬೆಳಕು ಚೆಲ್ಲುತ್ತದೆ. ಅಮೆರಿಕದಲ್ಲಿರುವ ಹೆಚ್ಚಿನ ಜನರಿಗೆ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವದು ಅನನುಕೂಲ ಕಲ್ಪನೆ ಮತ್ತು  ಹಿನ್ನಡೆಯಂತೆ ಭಾವಿಸಿದ್ದರು. ಓರ್ವ ರಿಯಲ್ ಎಸ್ಟೇಟ್ ಬಿಲಿಯನೇರ್ ಅಮೆರಿಕವನ್ನು ಹಿಂದಕ್ಕೆ ತಳ್ಳಬಹುದು ಎನ್ನುವ ಆತಂಕ ಜನರನ್ನು ಕಾಡುತ್ತಿತ್ತು. ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಜಾರಿಗೆ ತಂದ ಜನತೆಯ ಯೋಗಕ್ಷೇಮ ನೀತಿಗಳನ್ನು ರದ್ದುಗೊಳಿಸಬಹುದು ಎನ್ನುವ ಆತಂಕ ಕಾಡುತ್ತಿತ್ತು.
 
ಆದರೆ, ಅಧ್ಯಕ್ಷ ಟ್ರಂಪ್ ಎನ್ನುವುದು ನಿರ್ಲಕ್ಷಿಸಲು ಕಷ್ಟವಾದ ವಾಸ್ತವತೆಯಾಗಿದ್ದಾರೆ. ಅಧಿಕಾರಾವಧಿಯಲ್ಲಿ ತೆಗೆದುಕೊಂಡ ನಿರ್ಣಯಗಳು ಪ್ರಪಂಚದಾದ್ಯಂತ ಉತ್ತಮ ಅಥವಾ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಪ್ರಮುಖ ವಿಷಯವಾಗಿದೆ. ಜೇರೂಸಲೇಮ್‌ನ್ನು ಯಹೂದಿ ರಾಜ್ಯದ ರಾಜಧಾನಿಯಾಗಿ ಅಥವಾ ಅಂತರ್ಜಾಲದ ಸ್ವಾತಂತ್ರ್ಯವನ್ನು ಅಂತ್ಯಗೊಳಿಸುವ ನಿರ್ಧಾರವನ್ನು ಗುರುತಿಸುವ ನಿರ್ಧಾರವು ಬಹುದೊಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.2018 ರ ಅವಧಿಯಲ್ಲಿ ಇಂತಹ ಬದಲಾವಣೆಗಳನ್ನು ಅತೀವವಾಗಿ ವೀಕ್ಷಿಸುವ ಸಾಧ್ಯತೆಗಳಿವೆ.
 
ದೇಶದ ಪೂರ್ವದಲ್ಲಿ ಚೀನಾದ ಪ್ರಬಲ ನಾಯಕ ಕ್ಸಿ ಜಿನ್‌ಪಿಂಗ್ ಅಧ್ಯಕ್ಷ ಮಾವೊ ಮೀರಿಸಿ ಚೀನಾ ಅತ್ಯಂತ ಶಕ್ತಿಯುತ ನಾಯಕರಾಗಿ ಹೊರಹೊಮ್ಮಿದ್ದಲ್ಲದೇ ಅವರ ಎರಡನೆಯ ಅಧಿಕಾರಾವಧಿಯು ಭಾರತದ ಮೇಲೆ ಪರಿಣಾಮ ಬೀರುತ್ತದೆ, ಏಕೆಂದರೆ ಭಾರತವು ಅಮೆರಿಕದೊಂದಿಗೆ ಹೊಂದಿರುವ ಸ್ನೇಹಶೀಲ ಸಂಬಂಧ, ಪಾಕಿಸ್ತಾನದೊಂದಿಗಿನ ಚೀನಿ ಸಾಮೀಪ್ಯವು ಕಳವಳಕ್ಕೆ ಕಾರಣವಾಗಿದೆ ಎಂದು ನಾವು ಚೆನ್ನಾಗಿ ತಿಳಿದಿದ್ದೇವೆ. ಇದರ ಜೊತೆಯಲ್ಲಿ, ರೋಹಿಂಗ್ಯಾ ವಿವಾದ, ಬಿಟ್‌ಕಾಯಿನ್, ಪನಾಮಾ ಪೇಪರ್ಸ್ ಮತ್ತು ಯುರೋಪ್‌ನಲ್ಲಿ ಆರ್ಥಿಕ ಕ್ರಾಂತಿಯು ಹೊರಹೊಮ್ಮಿದೆ. ಇದಲ್ಲದೆ, ಭಾರತೀಯ ವಲಸೆಗಾರ ಪುತ್ರ ಲಿಯೋ ವರದ್ಕರ್ ಐರ್ಲೆಂಡಿನ ಕಿರಿಯ ವಯಸ್ಸಿನ ಪ್ರಧಾನಿಯಾಗಿರುವುದು ವಿಶೇಷವಾಗಿದೆ.
 
ನವೆಂಬರ್ 8, 2016 ರಂದು, ಪ್ರಧಾನಿ ಮೋದಿ ಹೆಚ್ಚಿನ ಮುಖಬೆಲೆಯ ನೋಟುಗಳ ಮೇಲೆ ನಿಷೇಧವನ್ನು ಘೋಷಿಸಿದರು, ಇಡೀ ದೇಶವನ್ನು ಆಘಾತಗೊಳಿಸಿದ ಒಂದು ಕ್ರಮ. ಅಂದು ಬಹಬೇಗನೆ ಸ್ಥಿತಿ ಉತ್ತಮ ಸ್ಥಿತಿಗೆ ಮರಳುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅದನ್ನು ಇನ್ನೂ ಖಚಿತಪಡಿಸಿಕೊಳ್ಳಬೇಕಾಗಿದೆ. ಬ್ಯಾಂಕುಗಳು ಮತ್ತು ಎಟಿಎಂಗಳ ಮುಂದೆ ಉದ್ದ ಮತ್ತು ಸರ್ಪದಂತಹ ಕ್ಯೂ ಸ್ಥಗಿತಗೊಂಡಿವೆ ಆದರೆ ಚರ್ಚೆ, ಮಾತುಕತೆ ಮತ್ತು ಅಂದಾಜಿನ ಕುರಿತು ಆತಂಕ ಇನ್ನೂ ಉಳಿದಿದೆ. ಅರ್ಧ ವರ್ಷದ ನಂತರ ಜಿಎಸ್‌ಟಿ ಎಂದು ಕರೆಯಲ್ಪಡುವ ಮತ್ತೊಂದು ಭಯಂಕರ ಸರಕಾರದ ನೀತಿ ಅಪ್ಪಳಿಸಿತು. ಆದಾಗ್ಯೂ, ಇದನ್ನು 1 ಜುಲೈ, 2017 ರಿಂದ ಜಾರಿಗೆ ತರಲಾಯಿತು ಆದರೆ ಹಲವಾರು ಪರಿಷ್ಕರಣೆಗಳು ಮುಂದುವರಿದಿವೆ.
 
ಅದೇ ರೀತಿ, ಮೇ 1 ರಂದು, ವಿಐಪಿ ವಾಹನಗಳಲ್ಲಿ ಕೆಂಪು ದೀಪಗಳನ್ನು ನಿಷೇಧಿಸಲಾಯಿತು ಮತ್ತು 2017 ರ ಅಗಸ್ಟ್ 22 ರಂದು ಸರ್ವೋಚ್ಚ ನ್ಯಾಯಾಲಯವು ತ್ವರಿತ ತ್ರಿವಳಿ ತಲಾಖ್ ಅನ್ನು ನಿಷೇಧಿಸುವ ಕಾನೂನು ಮಾಡುವಂತೆ ಸರ್ಕಾರವನ್ನು ಕೋರಿತ್ತು. ವರ್ಷದ ಅಂತ್ಯದ ವೇಳೆಗೆ, ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಮಂಡಿಸಿದರು. ಒಂದು ವೇಳೆ,  ಅದು ಕಾನೂನಾಗಿ ಜಾರಿಯಾದಲ್ಲಿ ಪುರುಷ-ಪ್ರಾಬಲ್ಯದ ಸಮಾಜದ ಹಿಡಿತದಿಂದ ಮುಸ್ಲಿಂ ಮಹಿಳೆಯರ ದೊಡ್ಡ ಭಾಗ  ಮುಕ್ತಗೊಳ್ಳುತ್ತದೆ. 
 
 ಕ್ರೈಯೊಜೆನಿಕ್ ಮೇಲಿನ ಹಂತದ ಎಂಜಿನ್-ಜಿಎಸ್ಎಲ್‌ವಿ ಮಾರ್ಕ್ 3 ಯಶಸ್ಸಿನೊಂದಿಗೆ ನಾವು ಉತ್ಸಾಹದ ಅಲೆಯಲ್ಲಿ ತೇಲುತ್ತಿರುವ ಸಂದರ್ಭದಲ್ಲಿಯೇ ಮುಂಬೈಯಲ್ಲಿ ಆಶಾ ಸಾಹ್ನಿಯ ಭವಿಷ್ಯದೊಂದಿಗೆ ಚೆಲ್ಲಾಟವಾಡಿರುವುದನ್ನು ಕಂಡಿದ್ದೇವೆ.
 
ಇಂದು, ನಾವು 2018 ರ ಆರಂಭದಲ್ಲಿ ನಮ್ಮ ನವನವೀನ ಹೊಸ ಆಶಾಭಾವನೆಗಳೊಂದಿಗೆ ನಿರಂತರವಾದ ಬೆಳೆಯುತ್ತಿರುವ ಭಾವನೆ, ದ್ವೇಷ ಮತ್ತು ಪ್ರತೀಕಾರದ ಭಾವನೆಗಳನ್ನು ತೊಡೆದುಹಾಕುತ್ತದೆ ಎಂದು ನಾವು ಭಾವಿಸುತ್ತೇವೆ. ಸಾಮಾಜಿಕ ಸಾಮರಸ್ಯದ ಕನಸುಗಳು ನಿಜವಾಗುವುದು ಮತ್ತು ನಾವು 2018 ಅನ್ನು ಪೂರ್ಣಗೊಳಿಸಿದಾಗ ಅದರ ಮೇಲೆ ಮತ್ತೆ ನೋಡಿದಾಗ ನಾವು ನೆನಪುಗಳ ವಿಕಿರಣ ಮಳೆಬಿಲ್ಲುಗಳನ್ನು ಪೂರೈಸುತ್ತೇವೆ ಎಂದು ಭಾವಿಸುತ್ತೇವೆ. ಮತ್ತು ಕತ್ತಲೆ ಮತ್ತು ಹತಾಶೆಯ ಯಾವುದೇ ಗುರುತು ಇರುವುದಿಲ್ಲ ಎನ್ನುವುದೇ ನಮ್ಮ ನಿರೀಕ್ಷೆಯಾಗಿದೆ.
 
ಇದು ಮಾಯಾ ಮಾಂತ್ರಿಕದಂಡದಿಂದ ಮಾಡಲಾಗುವುದಿಲ್ಲ, ಆದರೆ ಯಾವುದೇ ಮಾಯಾ ಮಾಂತ್ರಿಕದಂಡ ಇರಬಹುದಾದರೆ, ಅದು ನಮ್ಮ ಸಾಮೂಹಿಕ ಪ್ರಯತ್ನಗಳು. ಮತ್ತು ನಾವು ಸಾಮರಸ್ಯದಿಂದ ಪ್ರಯತ್ನಿಸಿದರೆ, ನಮ್ಮ ಎಲ್ಲಾ ಪ್ರಯತ್ನಗಳು ಸಫಲವಾಗಲಿವೆ. 'ವರ್ಷ 2018' ಎಂಬ ನಂದಾ ದೀಪ ಬೆಳಗಲಿ ಎನ್ನುವುದೇ ನಮ್ಮ ಹೃದಯದ ಹಾರೈಕೆ. 
 
ನಿಮಗೆಲ್ಲರಿಗೂ 2018 ಹೊಸ ವರ್ಷದ ಶುಭಾಷಯಗಳು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments