Select Your Language

Notifications

webdunia
webdunia
webdunia
webdunia

ಇತಿಹಾಸದ ಬಗ್ಗೆ ಮಾತನಾಡಲು ಹೋಗಿ ಬಿಜೆಪಿಗೆ ಅವಮಾನ ಮಾಡಿದ್ರಾ ಸಂಸದ ಗೋಪಾಲ್ ಶೆಟ್ಟಿ!

ಇತಿಹಾಸದ ಬಗ್ಗೆ ಮಾತನಾಡಲು ಹೋಗಿ ಬಿಜೆಪಿಗೆ ಅವಮಾನ ಮಾಡಿದ್ರಾ ಸಂಸದ ಗೋಪಾಲ್ ಶೆಟ್ಟಿ!
ಮುಂಬೈ , ಶುಕ್ರವಾರ, 6 ಜುಲೈ 2018 (12:30 IST)
ಮುಂಬೈ : ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಪಟ್ಟ ವಿಚಾರದ ಬಗ್ಗೆ ಮಾತನಾಡಲು ಹೋಗಿ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ಅವರು ತಮ್ಮ ಪಕ್ಷವನ್ನು ಮುಜುಗರಕ್ಕೀಡುಮಾಡಿದ್ದಾರೆ.


ಭಾನುವಾರ ಮುಂಬಯಿಯ ಶಿಯಾ ಕಬ್ರಸ್ಥಾನ್ ಕಮಿಟಿ ಆಯೋಜಿಸಿದ್ದ ಈದ್-ಇ-ಮೀಲಾದ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಗೋಪಾಲ್ ಶೆಟ್ಟಿ ಅವರು, ‘ಕ್ರೈಸ್ತರು ಅಂಗ್ರೇಜಿಗರು, ಅವರು ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಕೊಡುಗೆ ನೀಡಿಲ್ಲ.
ಆದರೆ ಹಿಂದು ಮತ್ತು ಮುಸ್ಲಿಮರು ಜೊತೆಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು’ ಎಂದು ಹೇಳಿಕೆ ನೀಡಿದ್ದಾರೆ.


ಈ ವಿಡಿಯೋ ಈಗ ವೈರಲ್ ಆಗಿದ್ದು, ಈ ಕುರಿತು ಕಾಂಗ್ರೆಸ್ ಬಿಜೆಪಿ ನಾಯಕರಿಗೆ ಲೇವಡಿ ಮಾಡಿದ್ದಾರೆ. ಬಿಜೆಪಿ ಸಂಸದರಿಗೆ ಇತಿಹಾಸನ ಜ್ಞಾನ ಸ್ವಲ್ಪವೂ ಇಲ್ಲ .ಬಿಜೆಪಿ ದೇಶವನ್ನು ಕೋಮು ವಿಚಾರದಲ್ಲಿ ವಿಭಜಸಿ ರಾಜಕಾರಣ ಮಾಡುತ್ತಿದೆ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ ತಾರತಮ್ಯ ಬಗ್ಗೆ ಬಿಜೆಪಿಗೆ ಸದನದಲ್ಲೇ ಉತ್ತರಿಸುವೆ: ಸಿಎಂ ಎಚ್ ಡಿಕೆ