Select Your Language

Notifications

webdunia
webdunia
webdunia
webdunia

ಎಷ್ಟು ದೇವಸ್ಥಾನ ಸುತ್ತಿದ್ರೂ ಅವರಲ್ಲಿರುವ ಕೆಟ್ಟ ಮನಸ್ಸು ಕಾಣೆಯಾಗಿಲ್ವಲ್ಲ? ಸಿಎಂ ಎಚ್ ಡಿಕೆಗೆ ಅರವಿಂದ ಲಿಂಬಾವಳಿ ಟಾಂಗ್

ಎಷ್ಟು ದೇವಸ್ಥಾನ ಸುತ್ತಿದ್ರೂ ಅವರಲ್ಲಿರುವ ಕೆಟ್ಟ ಮನಸ್ಸು ಕಾಣೆಯಾಗಿಲ್ವಲ್ಲ? ಸಿಎಂ ಎಚ್ ಡಿಕೆಗೆ ಅರವಿಂದ ಲಿಂಬಾವಳಿ ಟಾಂಗ್
ಬೆಂಗಳೂರು , ಭಾನುವಾರ, 23 ಸೆಪ್ಟಂಬರ್ 2018 (09:35 IST)
ಬೆಂಗಳೂರು: ಎಷ್ಟು ದೇವಾಲಯ ಸುತ್ತಿದರೂ ಏನು ಪ್ರಯೋಜನ. ಅವರೊಳಗಿನ ಕೆಟ್ಟ ಮನಸ್ಸು ಹಾಗೇ ಉಳಿದುಕೊಂಡಿದೆಯಲ್ಲಾ? ಎಂದು ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಸಿಎಂ ಕುಮಾರಸ್ವಾಮಿ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ವಿರುದ್ಧ ಜನರು ದಂಗೆ ಏಳುವಂತೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ನೀಡಿದ ಹೇಳಿಕೆಯನ್ನು ಆಧರಿಸಿ ಅರವಿಂದ ಲಿಂಬಾವಳಿ ಈ ಮಾತುಗಳನ್ನಾಡಿದ್ದಾರೆ.

100 ದಿನದಲ್ಲಿ 50 ಕ್ಕೂ ಹೆಚ್ಚು ದೇವಾಲಯ ಸುತ್ತಿದರೂ ಅವರೊಳಗಿನ ಕೆಟ್ಟ ಮನಸ್ಸು ತಮ್ಮ ಗೂಂಡಾಗಳಿಗೆ ದಂಗೆ ಏಳುವಂತೆ ಆದೇಶಿಸುವುದನ್ನು ಬಿಟ್ಟಿಲ್ಲ. ಅಂದರೆ ಅವರು ಎಷ್ಟೇ ದೇವಾಲಯ ಸುತ್ತಿದರೂ ಅವರೊಳಗೆ ಕೆಟ್ಟ ಬುದ್ಧಿ ಹಾಗೇ ಉಳಿದುಕೊಂಡಿದೆ ಎಂದರ್ಥ ಎಂದು ಲಿಂಬಾವಳಿ ಟಾಂಗ್ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಾಯಕರಿಂದ ಕೇಂದ್ರ ಸರ್ಕಾರದ ಅಧಿಕಾರ ದುರ್ಬಳಕೆ- ದಿನೇಶ್ ಗುಂಡೂರಾವ್