Select Your Language

Notifications

webdunia
webdunia
webdunia
webdunia

ಪ್ರತಿಭೆಗೆ ಬೆಲೆ ಕೊಡಿ, ಟಿಆರ್ ಪಿಗಲ್ಲ: ಜೀ ಕನ್ನಡ ಸರಿಗಮಪ ವಿರುದ್ಧ ವೀಕ್ಷಕರು ಗರಂ!

ಪ್ರತಿಭೆಗೆ ಬೆಲೆ ಕೊಡಿ, ಟಿಆರ್ ಪಿಗಲ್ಲ: ಜೀ ಕನ್ನಡ ಸರಿಗಮಪ ವಿರುದ್ಧ ವೀಕ್ಷಕರು ಗರಂ!
, ಮಂಗಳವಾರ, 19 ಫೆಬ್ರವರಿ 2019 (09:48 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ಸರಿಗಮಪ ರಿಯಾಲಿಟಿ ಶೋ ಮತ್ತೊಂದು ಫೈನಲ್ ನತ್ತ ಹೆಜ್ಜೆಹಾಕಿದೆ.


ಆದರೆ ಫೈನಲ್ ಗೆ ಆಯ್ಕೆಯಾಗದ ಸ್ಪರ್ಧಿಗಳ ಲಿಸ್ಟ್ ನೋಡಿ ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಈ ಕಾರ್ಯಕ್ರಮದಲ್ಲಿ ಯಾವತ್ತೂ ಪ್ರತಿಭೆಗೆ ಬೆಲೆ ಕೊಡಲ್ಲ, ಟಿಆರ್ ಪಿ ಹೆಚ್ಚಿಸುವವರಿಗೆ ಮಾತ್ರ ಮಣೆ ಹಾಕಲಾಗುತ್ತದೆ. ನಿಜವಾದ ಗಾಯಕರನ್ನು ವಿನ್ ಮಾಡಿಸಲ್ಲ ವಿನ್ನರ್ ಯಾರೆಂದು ಮೊದಲೇ ಫಿಕ್ಸ್ ಆಗಿರುತ್ತದೆ ಎಂದೆಲ್ಲಾ ವೀಕ್ಷಕರು ಅಸಮಾಧಾನ ಹೊರಹಾಕಿದ್ದಾರೆ.

ಈ ಸೀಸನ್ ನಲ್ಲಿ ಪೃಥ್ವಿ ಭಟ್, ರಜತ್ ಮಯ್ಯರಂತಹ ಪ್ರತಿಭೆಗಳನ್ನು ಫೈನಲ್ ಗೆ ಆಯ್ಕೆ ಮಾಡದೇ ಮುಗ್ಧತೆಯಿಂದಲೇ ವೀಕ್ಷಕರನ್ನು ಸೆಳೆದ ಹಳ್ಳಿ ಹಾಡಿನ ಸರದಾರ ಹನುಮಂತಪ್ಪ ಮುಂತಾದವರನ್ನು ಆಯ್ಕೆ ಮಾಡಿದ್ದು, ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದು ಪ್ರತೀ ಬಾರಿಯೂ ವೀಕ್ಷಕರ ಆಪಾದನೆಯಾಗಿದ್ದರೂ ತಮ್ಮ ಮೆಚ್ಚಿನ ಸ್ಪರ್ಧಿಗಳು ಫೈನಲ್ ಗೆ ಆಯ್ಕೆಯಾಗದೇ ಇರುವುದರ ಅಸಮಾಧಾನವನ್ನು ಸೋಷಿಯಲ್ ಮೀಡಿಯಾ ಮೂಲಕ ವೀಕ್ಷಕರು ಹೊರಹಾಕುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಗುವಿನ ಹಾಡಿಗೆ ಕರಗಿತು ಕಿಚ್ಚ ಸುದೀಪ್ ಹೃದಯ