Select Your Language

Notifications

webdunia
webdunia
webdunia
webdunia

‘ಸ್ವಾಮೀಜಿ’ ಸುದರ್ಶನ್ ಸಾವಿಗೆ ತಲ್ಲಣಿಸಿದ ಅಗ್ನಿಸಾಕ್ಷಿ ಧಾರವಾಹಿ ತಂಡ

‘ಸ್ವಾಮೀಜಿ’ ಸುದರ್ಶನ್ ಸಾವಿಗೆ ತಲ್ಲಣಿಸಿದ ಅಗ್ನಿಸಾಕ್ಷಿ ಧಾರವಾಹಿ ತಂಡ
ಬೆಂಗಳೂರು , ಶನಿವಾರ, 9 ಸೆಪ್ಟಂಬರ್ 2017 (09:03 IST)
ಬೆಂಗಳೂರು: ಹಿರಿಯ ನಟ ಸುದರ್ಶನ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅವರು ಬಂದಾಗಲೆಲ್ಲಾ ಅಗ್ನಿಸಾಕ್ಷಿ ಧಾರವಾಹಿ ಕತೆಗೆ ತಿರುವು ಸಿಗುತ್ತಿತ್ತು. ಇದೀಗ ಅವರನ್ನು ಕಳೆದುಕೊಂಡಿರುವುದಕ್ಕೆ ಧಾರವಾಹಿ ತಂಡ ಮರುಗಿದೆ.

 
ನಿರ್ದೇಶಕ ಮೈಸೂರು ಮಂಜು ತಮ್ಮ ಕೊನೆಯ ದಿನದ ಶೂಟಿಂಗ್ ನ್ನು ನೆನೆಸಿಕೊಂಡು ಕಂಬನಿ ಮಿಡಿದಿದ್ದಾರೆ. ಈ ಧಾರವಾಹಿ ಶೂಟಿಂಗ್ ಸಂದರ್ಭದಲ್ಲಿಯೂ ತಮಗೆ ಅನಾರೋಗ್ಯವಿದ್ದರೂ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸಿದ್ದರು ಹಿರಿಯ ನಟ.

ಕೊನೆಯ ಬಾರಿಗೆ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ನಡೆದ ವಿಶೇಷ ಸಂಚಿಕೆ ಶೂಟಿಂಗ್ ಗಾಗಿ ಬಂದಿದ್ದರು. ಅವರನ್ನು ನೋಡಿ ಕಲಿಯಬೇಕಾದ್ದು ತುಂಬಾ ಇದೆ ಎಂದು ಮಂಜು ಹೇಳಿಕೊಂಡಿದ್ದಾರೆ. ಇನ್ನೊಂದೆಡೆ ಇದೇ ಧಾರವಾಹಿ ತಂಡದ ನಟ ರಾಜೇಶ್ ಧ್ರವ ಕೂಡಾ ಅಗಲಿದ ಹಿರಿಯ ನಟನ ನೆನೆಸಿಕೊಂಡಿದ್ದಾರೆ.

ಕೊನೆಯ ಬಾರಿ ನಮ್ಮ ಕನ್ನಡ ಚಿತ್ರರಂಗದ ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬದುಕಿರುವ ಅತಿ ಹಿರಿಯ ನಾಯಕ ನಟ ಎಂದು ಹೇಳಿಕೊಂಡಿದ್ದೀರಿ. ನೀವು ಮರೆಯಲಾಗದ ಮಾಣಿಕ್ಯ ಸರ್ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ.. ಪ್ರಾಣ ರಕ್ಷಣೆಗೆ ಅರ್ಧಗಂಟೆ ಹೋರಾಡಿದರು! ನೋಡುತ್ತಿದ್ದಂತೇ ಪ್ರಾಣ ಬಿಟ್ಟರು!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಕ್ರಿಕೆಟರ್ ಜತೆ ಮದುವೆ ಸುದ್ದಿ ಬಗ್ಗೆ ಬೆಡಗಿ ತಮನ್ನಾ ಹೇಳಿದ್ದೇನು?