Select Your Language

Notifications

webdunia
webdunia
webdunia
webdunia

‘ಅಗ್ನಿಸಾಕ್ಷಿ’ ಧಾರವಾಹಿ ಕತೆ ಮುಗಿಯಿತಾ?! ಅಭಿಮಾನಿಗಳಿಗೊಂದು ಡೌಟು!

‘ಅಗ್ನಿಸಾಕ್ಷಿ’ ಧಾರವಾಹಿ ಕತೆ ಮುಗಿಯಿತಾ?! ಅಭಿಮಾನಿಗಳಿಗೊಂದು ಡೌಟು!
ಬೆಂಗಳೂರು , ಶನಿವಾರ, 23 ಮಾರ್ಚ್ 2019 (09:41 IST)
ಬೆಂಗಳೂರು: ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರವಾಹಿಗೆ ಅದೆಷ್ಟೋ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆದರೆ ಧಾರವಾಹಿ ಇತ್ತೀಚೆಗೆ ಪಡೆದುಕೊಳ್ಳುತ್ತಿರುವ ತಿರುವು ನೋಡಿದರೆ ಅಭಿಮಾನಿಗಳಿಗೆ ಈ ಧಾರವಾಹಿ ಮುಗಿದೇ ಹೋಗುತ್ತಿದೆಯಾ ಎಂಬ ಅನುಮಾನ ಕಾಡಲು ಶುರುವಾಗಿದೆ.


ವಿಲನ್ ಚಂದ್ರಿಕಾ ಬಣ್ಣ ಬಯಲಾಗಿದೆ, ಅತ್ತ ರಾಧಿಕಾನೂ ಸನ್ನಿಧಿ ಭೇಟಿಯಾಗಿ ಆಗಿದೆ. ಇನ್ನು ಸಿದ್ಧಾರ್ಥ್ ವಾಪಾಸ್ ಆಗುವುದು ಮತ್ತು ಚಂದ್ರಿಕಾಗೆ ಶಿಕ್ಷೆ ಸಿಗುವುದಷ್ಟೇ ಬಾಕಿ. ಹಾಗಿದ್ದರೆ ಅಗ್ನಿಸಾಕ್ಷಿ ಇಲ್ಲಿಗೇ ಮುಗಿಯಿತಾ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ.

ಜತೆಗೇ ‘ರಂಗನಾಯಕಿ’ ಎನ್ನುವ ಹೊಸ ಧಾರವಾಹಿಯ ಪ್ರೋಮೋ ಬರುತ್ತಿರುವುದು ನೋಡಿ ಅಭಿಮಾನಿಗಳಿಗೆ ಅನುಮಾನವಾಗಿದೆ. ಆದರೆ ‘ಅಗ್ನಿಸಾಕ್ಷಿ’ ಮುಗಿಯುತ್ತಿಲ್ಲ. ಕತೆ ಇನ್ನೊಂದು ತಿರುವು ಪಡೆಯುತ್ತದೆ ಎಂಬ ಸುದ್ದಿ ಧಾರವಾಹಿ ಮೂಲಗಳಿಂದ ಬಂದಿದೆ. ಹೀಗಾಗಿ ಅಪ್ಪಟ ಅಭಿಮಾನಿಗಳು ಸಮಧಾನ ಪಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ವಾರದಿಂದ ಮತ್ತೆ ಶುರುವಾಗಲಿದೆ ಕನ್ನಡ ಕೋಗಿಲೆ