Select Your Language

Notifications

webdunia
webdunia
webdunia
webdunia

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ; ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಮುಂದಾದ ಕೇರಳ ಸರ್ಕಾರ

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ; ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಮುಂದಾದ ಕೇರಳ ಸರ್ಕಾರ
ಕೇರಳ , ಸೋಮವಾರ, 3 ಡಿಸೆಂಬರ್ 2018 (12:06 IST)
ಕೇರಳ : ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಕೇರಳ ಸರ್ಕಾರ ಮುಂದಾಗಿದೆ.


ಮಹಿಳೆಯರ ಮಹಾವಾಲ್ ನಿರ್ಮಿಸಲು ಸರ್ಕಾರದಿಂದ ಕರೆ ನೀಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಥಾಮಸ್ ಐಸಾಕ್ ‘ಪುರಾತನ ಕಟ್ಟಳೆಗಳನ್ನು ಎಷ್ಟು ದಿನ ಜೋತು ಬೀಳುವುದು. ಲಕ್ಷಾಂತರ ಮಹಿಳೆಯರು ಶಬರಿಮಲೆಗೆ ಬನ್ನಿ. ಹೊಸ ವರ್ಷದಂದು ಮಹಾಗೋಡೆಯಂತೆ ಒಗ್ಗೂಡಲು ಬನ್ನಿ’ ಎಂದು ತಿಳಿಸಿದ್ದಾರೆ.


ಅಲ್ಲದೇ ಕೇರಳದ ವಿಧಾನಸಭೆಯಲ್ಲಿ ಈ ಬಗ್ಗೆ ಬಿಜೆಪಿ ಭಾರೀ ಪ್ರತಿಭಟನೆ ನಡೆಸಿದ ಕಾರಣ ಈಗಾಗಲೇ ನಾಲ್ವರು ಬಿಜೆಪಿ ಸಂಸದರನ್ನು ಕೇರಳಕ್ಕೆ ಕಳುಹಿಸಿ ಸರಿಯಾದ ವರದಿ ನೀಡುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೂಚಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆಯಲ್ಲಿ ಡಿಸಿಎಂ ಪುತ್ರಿಯಿಂದ ಅಡ್ಡಾದಿಡ್ಡಿ ಕಾರು ಚಾಲನೆ