Select Your Language

Notifications

webdunia
webdunia
webdunia
webdunia

ಪತಿಯಿಂದಲೇ ಕೊಲೆಯಾದ ಪತ್ನಿ ಕೊನೆಯ ಬಾರಿಗೆ ಅಂಗಲಾಚಿದ್ದು ಏನು?!

ಪತಿಯಿಂದಲೇ ಕೊಲೆಯಾದ ಪತ್ನಿ ಕೊನೆಯ ಬಾರಿಗೆ ಅಂಗಲಾಚಿದ್ದು ಏನು?!
ನವದೆಹಲಿ , ಗುರುವಾರ, 15 ನವೆಂಬರ್ 2018 (09:11 IST)
ನವದೆಹಲಿ: ಬೇರೆ ಹೆಣ್ಣಿನ ಸಹವಾಸಕ್ಕೆ ಬಿದ್ದು, ಪತ್ನಿಯನ್ನು ಬಾಲ್ಕನಿಯಿಂದ ನೂಕಿ ಹತ್ಯೆಗೈದ ಪತಿಯ ಬಳಿ ಆಕೆ ಅಂತಿಮವಾಗಿ ಹೇಳಿದ್ದೇನು ಗೊತ್ತಾ?

ಗುರುಗಾಂವ್ ನಲ್ಲಿ ಅಕ್ಟೋಬರ್ 27 ರಂದು ಪತಿಯೇ ಪತ್ನಿಯನ್ನು ತಮ್ಮ ಅಪಾರ್ಟ್ ಮೆಂಟ್ ನ ಬಾಲ್ಕನಿಯಿಂದ ನೂಕಿ ಹತ್ಯೆಗೈದ ಘಟನೆ ನಡೆದಿತ್ತು. ಈ ಪ್ರಕರಣದ ಆರೋಪಿ ಪತಿ ವಿಕ್ರಮ್ ಚೌಹಾನ್ (35) ಮತ್ತು ಆತನ ಪ್ರೇಯಸಿ ಶಿಫಾಲಿ ಭಾಸಿನ್ ಎಂಬಾಕೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಪತಿ ವಿಕ್ರಮ್ ಪತ್ನಿ ಹೇಳಿದ ಕೊನೆ ಮಾತೇನೆಂದು ಬಾಯ್ಬಿಟ್ಟಿದ್ದಾನೆ. ವಿಕ್ರಮ್ ಶಿಫಾಲಿ ಜತೆಗೆ ಅಕ್ರಮ ಸಂಬಂಧ ಹೊಂದಿದ್ದನ್ನು ತಿಳಿದ ಪತ್ನಿ ದೀಪಿಕಾ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ಪತಿ ಪ್ರೇಯಸಿಯ ಸಹಾಯದಿಂದ ಆಕೆಯನ್ನು ಕೊಲೆ ಮಾಡಿದ್ದ. ಬಳಿಕ ಆಕೆ ಬಾಲ್ಕನಿಯಿಂದ ಬಿದ್ದಳೆಂದು ನಾಟಕವಾಡಿದ್ದ. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ನಿಜ ತಿಳಿದುಬಂದಿತ್ತು.

ಬಾಲ್ಕನಿಯಿಂದ ಪತ್ನಿಯನ್ನು ನೂಕಿ ಕೊಲೆ ಮಾಡುವ ಮೊದಲು ‘ದಯವಿಟ್ಟು ನನ್ನ ಸಾಯಿಸಬೇಡ. ನಮ್ಮ ಮಕ್ಕಳನ್ನು ನಾನು ಇಷ್ಟಪಡುತ್ತೇನೆ’ ಎಂದು ಪತಿ ವಿಕ್ರಮ್ ಬಳಿ ದೀಪಿಕಾ ಅಂಗಲಾಚಿದ್ದಳಂತೆ. ಆದರೂ ಕಟುಕ ಪತಿ ಈ ಕೃತ್ಯವೆಸಗಿದ್ದಾನೆ. ವಿಪರ್ಯಾಸವೆಂದರೆ ಕೊಲೆಗೆ ಸಹಾಯ ಮಾಡಿದ ಆರೋಪದಲ್ಲಿ ಬಂಧಿತಳಾಗಿರುವ ವಿಕ್ರಮ್ ಪ್ರೇಯಸಿ ಶಿಫಾಲಿ ಕೂಡಾ ಗರ್ಭಿಣಿ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ನವಂಬರ್ 17 ಕ್ಕೆ ಶಬರಿಮಲೆಯಲ್ಲಿ ನಡೆಯಲಿದೆ ಮತ್ತೊಂದು ಹೈಡ್ರಾಮಾ