Select Your Language

Notifications

webdunia
webdunia
webdunia
webdunia

ಯಾತ್ರೆಗಿಂತ ರಾಹುಲ್ ಗಾಂಧಿಗೆ ಪ್ರಚಾರವೇ ಹೆಚ್ಚಾಯ್ತು: ಸುಬ್ರಮಣಿಯನ್ ಸ್ವಾಮಿ ಟೀಕೆ

ಯಾತ್ರೆಗಿಂತ ರಾಹುಲ್ ಗಾಂಧಿಗೆ ಪ್ರಚಾರವೇ ಹೆಚ್ಚಾಯ್ತು: ಸುಬ್ರಮಣಿಯನ್ ಸ್ವಾಮಿ ಟೀಕೆ
ನವದೆಹಲಿ , ಭಾನುವಾರ, 9 ಸೆಪ್ಟಂಬರ್ 2018 (09:05 IST)
ನವದೆಹಲಿ: ಕೈಲಾಸ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಪವಿತ್ರ ತೀರ್ಥ ಸ್ಥಳದ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

 ರಾಹುಲ್ ಕೈಲಾಸ ಯಾತ್ರೆ ಮಾಡುತ್ತಿರುವ ಫೋಟೋಗಳನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಕಾಂಗ್ರೆಸ್ ಇದರ ಜತೆಗೆ ರಾಹುಲ್ ಎಷ್ಟು ದೂರ ನಡೆದರು, ಎಷ್ಟು ಕ್ಯಾಲೋರಿ ಇಳಿಸಿಕೊಂಡರು ಎಂದೆಲ್ಲಾ ವಿವರ ನೀಡುತ್ತಿದೆ.

ಹೀಗಾಗಿ ರಾಹುಲ್ ಕೈಲಾಸ ಯಾತ್ರೆ ಕೈಗೊಂಡಿರುವುದು ಕೇವಲ ಪ್ರಚಾರಕ್ಕಷ್ಟೇ. ಇದರಲ್ಲಿ ಧಾರ್ಮಿಕ ಶ್ರದ್ಧೆ ಮುಖ್ಯವಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ. ಇದಕ್ಕೂ ಮೊದಲು ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ರಾಹುಲ್ ಕೈಲಾಸ ಯಾತ್ರೆ ಕೈಗೊಂಡಿಲ್ಲ. ಇದು ಎಡಿಟೆಡ್ ಫೋಟೋ ಎಂದು ಆಪಾದಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಅವಧಿ ಮುಗಿದರೂ ಬಿಜೆಪಿಗೆ ಅಮಿತ್ ಶಾ ಅವರೇ ಸಾರಥಿ