Select Your Language

Notifications

webdunia
webdunia
webdunia
webdunia

ಪತ್ನಿಗೆ ಆರು ತಿಂಗಳಿಗೇ ವಿಚ್ಛೇದನ ಕೊಟ್ಟ ಬಗ್ಗೆ ಲಾಲೂ ಪುತ್ರ ಹೇಳಿದ್ದೇನು ಗೊತ್ತಾ?

ಪತ್ನಿಗೆ ಆರು ತಿಂಗಳಿಗೇ ವಿಚ್ಛೇದನ ಕೊಟ್ಟ ಬಗ್ಗೆ ಲಾಲೂ ಪುತ್ರ ಹೇಳಿದ್ದೇನು ಗೊತ್ತಾ?
ಪಾಟ್ನಾ , ಭಾನುವಾರ, 4 ನವೆಂಬರ್ 2018 (09:17 IST)
ಪಾಟ್ನಾ: ಆರ್ ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ತಮ್ಮ ಪತ್ನಿ ಐಶ್ವರ್ಯಾ ರೈಗೆ ಮದುವೆಯಾದ ಆರೇ ತಿಂಗಳಿಗೆ ವಿಚ್ಛೇದನ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಹೌದು ನಾವಿಬ್ಬರೂ ವಿಚ್ಛೇದನವಾಗುತ್ತಿರುವ ಸುದ್ದಿ ನಿಜ. ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದೂ ನಿಜ. ಇಷ್ಟವಿಲ್ಲದ ಕಷ್ಟದ ಬದುಕನ್ನು ಒಟ್ಟಿಗೆ ಕಳೆಯುವುದರಲ್ಲಿ ಅರ್ಥವಿಲ್ಲ’ ಎಂದು  ತೇಜ್ ಪ್ರತಾಪ್ ವಿಚ್ಛೇದನದ ಕಾರಣ ನೀಡಿದ್ದಾರೆ.

ಅವರ ಪರ ವಕೀಲರೂ ಕೂಡಾ ಈ ಬಗ್ಗೆ ಹೇಳಿಕೆ ನೀಡಿದ್ದು, ನನ್ನ ಕಕ್ಷಿದಾರರು ತಮ್ಮ ಪತ್ನಿ ಜತೆ ಹೊಂದಾಣಿಕೆಯಾಗುತ್ತಿಲ್ಲ ಎನ್ನುವ ಕಾರಣಕ್ಕೆ ವಿಚ್ಛೇದನ ಕೋರಿದ್ದಾರೆ. ಆದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೊಡಲಾಗದು ಎಂದು ವಕೀಲರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗಲು ಒಪ್ಪದ 9 ನೇ ತರಗತಿ ವಿದ್ಯಾರ್ಥಿನಿಯ ಕತ್ತು ಸೀಳಿದ ಶಿಕ್ಷಕ