Select Your Language

Notifications

webdunia
webdunia
webdunia
webdunia

ಆಪರೇಷನ್ ಥಿಯೇಟರ್ ನಲ್ಲಿ ರಾಸಲೀಲೆಯಲ್ಲಿ ತೊಡಗಿದ ಡಾಕ್ಟರ್ ಮತ್ತು ನರ್ಸ್ ಅಮಾನತು

ಆಪರೇಷನ್ ಥಿಯೇಟರ್ ನಲ್ಲಿ ರಾಸಲೀಲೆಯಲ್ಲಿ ತೊಡಗಿದ ಡಾಕ್ಟರ್ ಮತ್ತು ನರ್ಸ್ ಅಮಾನತು
ಮಧ್ಯಪ್ರದೇಶ , ಮಂಗಳವಾರ, 15 ಜನವರಿ 2019 (09:53 IST)
ಮಧ್ಯಪ್ರದೇಶ : ಆಸ್ಪತ್ರೆಯ ಸಿವಿಲ್ ಸರ್ಜನ್ ಡಾಕ್ಟರ್ ಮತ್ತು ನರ್ಸ್  ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ ರಾಸಲೀಲೆ ನಡೆಸಿದ ಹಿನ್ನಲೆಯಲ್ಲಿ ಅವರಿಬ್ಬರನ್ನು ಕೆಲಸದಿಂದ ವಜಾ ಮಾಡಲಾಗಿದೆ.


ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲಾಸ್ಪತ್ರೆಯ ಸಿವಿಲ್ ಸರ್ಜನ್ ಡಾಕ್ಟರ್ ರಾಜು ನಿಡಿಯಾರಿಯಾ ಮತ್ತು ನರ್ಸ್  ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ ಒಬ್ಬರನೊಬ್ಬರು ತಬ್ಬಿಕೊಂಡು ಚುಂಬಿಸುತ್ತಾ ರಾಸಲೀಲೆಯಲ್ಲಿ ತೊಡಗಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಈ ಹಿನ್ನಲೆಯಲ್ಲಿ ಡಾಕ್ಟರ್ ಮತ್ತು ನರ್ಸ್ ನ್ನು ಕೆಲಸದಿಂದ ವಜಾ ಮಾಡಲಾಗಿದೆ.


ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಉಜ್ಜಿಯಿನಿ ಜಿಲ್ಲೆಯ ಜಿಲ್ಲಾಧಿಕಾರಿ ಶಶಾಂಕ್ ಅವರು,’ ಚುಂಬನ ಪ್ರಕರಣವು ಯಾವುದೇ ಅಧಿಕಾರಿಗೆ ಸೂಕ್ತವಲ್ಲ. ಪ್ರಕರಣದ ಗಂಭೀರತೆಯ ಕಾರಣದಿಂದಾಗಿ ನಾನು ಜಿಲ್ಲೆಯ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ರಾಜು ನಿಡಿಯಾರಿಯಾ ರನ್ನು ಹುದ್ದೆಯಿಂದ  ತೆಗೆದುಹಾಕಿದೆ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಕ್ರಾಂತಿ ಹಬ್ಬಕ್ಕೆ ಹಣ ಕೊಡಲಿಲ್ಲವೆಂದು ಪತಿ ಪತ್ನಿಗೆ ಮಾಡಿದ್ದೇನು ಗೊತ್ತಾ?