Select Your Language

Notifications

webdunia
webdunia
webdunia
webdunia

ಈ ಬಾರಿ ಪಿಯುಸಿ ಪಾಸ್ ಆದ ವ್ಯಕ್ತಿಗಳನ್ನು ಪ್ರಧಾನಿಯಾಗಿ ಆಯ್ಕೆ ಮಾಡಬೇಡಿ - ಅರವಿಂದ್ ಕೇಜ್ರಿವಾಲ್

ಈ ಬಾರಿ ಪಿಯುಸಿ ಪಾಸ್ ಆದ ವ್ಯಕ್ತಿಗಳನ್ನು ಪ್ರಧಾನಿಯಾಗಿ ಆಯ್ಕೆ ಮಾಡಬೇಡಿ - ಅರವಿಂದ್ ಕೇಜ್ರಿವಾಲ್
ನವದೆಹಲಿ , ಗುರುವಾರ, 14 ಫೆಬ್ರವರಿ 2019 (10:44 IST)
ನವದೆಹಲಿ : ಈ ಬಾರಿ ಪಿಯುಸಿ ಪಾಸ್ ಆದ ವ್ಯಕ್ತಿಗಳನ್ನು ಪ್ರಧಾನಿಯಾಗಿ ಆಯ್ಕೆ ಮಾಡಬೇಡಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪ್ರದಾನಿ ಮೋದಿಯವರ  ಕುರಿತು  ವ್ಯಂಗ್ಯವಾಡಿದ್ದಾರೆ.


ಜಂತರ್ ಮಂತರ್ ನಲ್ಲಿ ನಡೆದ ಮಮತಾ ಬ್ಯಾನರ್ಜಿ ಅವರ ನೇತೃತ್ವದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಜ್ರಿವಾಲ್, ‘ಪ್ರಧಾನಿ ಹುದ್ದೆ ಎಂಬುದು ತುಂಬಾ ಪ್ರಮುಖ ಸ್ಥಾನ. ಕಳೆದ ಬಾರಿ 12ನೇ ತರಗತಿ ಪಾಸಾದ ವ್ಯಕ್ತಿಯನ್ನು ಪ್ರಧಾನಿ ಹುದ್ದೆಯಲ್ಲಿ ಕೂರಿಸಿದಿರಿ. ಅದರ ಪರಿಣಾಮ ಏನಾಗಿದೆ ಎಂದು ಇಡೀ ದೇಶಕ್ಕೇ ತಿಳಿದಿದೆ. ಆ ವ್ಯಕ್ತಿಗೆ ಯಾವ ಯಾವ ಕಡತಗಳಿಗೆ ಸಹಿ ಹಾಕಬೇಕು ಎಂಬ ಕನಿಷ್ಠ ಜ್ಞಾನ ಕೂಡ ಇಲ್ಲ’ ಎಂದು ಲೇವಡಿ ಮಾಡಿದ್ದಾರೆ.


‘ಅಲ್ಲದೇ ಅತ್ಯುತ್ತಮ ವ್ಯಕ್ತಿಗಳು, ಉನ್ನತ ಶಿಕ್ಷಣ ಹೊಂದಿರುವವರನ್ನು ಆ ಹುದ್ದೆಗೆ ಆಯ್ಕೆ ಮಾಡಬೇಕಿದೆ. ಈ ಬಾರಿ ಪಿಯುಸಿ ಪಾಸ್ ಆದ ವ್ಯಕ್ತಿಗಳನ್ನು ಪ್ರಧಾನಿಯಾಗಿ ಆಯ್ಕೆ ಮಾಡಬೇಡಿ’ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಮಿಗಳ ದಿನದ ಹಿನ್ನಲೆ; ಮಾರುಕಟ್ಟೆಯಲ್ಲಿ ಭಾರೀ ದುಬಾರಿಯಾಯ್ತು ರೆಡ್ ರೋಸ್